Advertisement

ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಸಿದ್ಧರಾಮಯ್ಯ

09:29 PM Sep 10, 2022 | Team Udayavani |

ಕುಳಗೇರಿ ಕ್ರಾಸ್(ಬಾಗಲಕೋಟೆ): ಮಲಪ್ರಭಾ ಪ್ರವಾಹ ಪೀಡಿತ ಪ್ರದೆಶಗಳಿಗೆ ಇಂದು ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಸಂತ್ರಸ್ತರ ಸಮಸ್ಯೆಗಳ ಆಲಿಸಿ ಇನ್ನು ಆರೇಳು ತಿಂಗಳಾದರೆ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೆವೆ. ಆಗ ನಿಮ್ಮ ಕೆಲಸ ನಾವೆ ಮಾಡುತ್ತೇವೆ ಅಲ್ಲಿಯವರೆಗೂ ತಾಳಿ ಎಂದು ಕಿತ್ತಲಿ ಗ್ರಾಮದಲ್ಲಿ ಮನೆ ಕೇಳಿದ ಸಂತ್ರಸ್ತರೆದುರು ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟರು.

Advertisement

ನಮಗೆ ಇರಲು ಸೂರಿಲ್ಲ ನಾವು ಕುಟುಂಬ ಸಮೇತ ಬೀದಿಯಲ್ಲಿ ಬಿದ್ದಿದ್ದೇವೆ ನಮಗೆ ಮನೆ ಮಂಜೂರು ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ”ಸಿಎಂ ಆದರೆ ಪೂರ್ಣ ಗ್ರಾಮ ಶಿಫ್ಟ್ ಮಾಡ್ತಾರೆ” ಸುಮ್ಮನಿರೆವ್ವ ಎಂದು ಕಿತ್ತಲಿ ಗ್ರಾಮದ ಅಭಿಮಾನಿ ಮಾತಿಗೆ ಸಿದ್ಧರಾಮಯ್ಯ ”ಹೌದು ನಾನು ಸಿಎಂ ಆದ್ರೆ ನಿಮ್ಮ ಪೂರ್ಣ ಗ್ರಾಮ ಶಿಫ್ಟ್ ಮಾಡಿ ಕೊಡ್ತೀನಿ. ಈ ಸರ್ಕಾರಕ್ಕೆ ಸಂತ್ರಸ್ಥರ ಗೋಳು ಕೇಳೋದಿಲ್ಲ, ಜನಪರ ಕೆಲಸವಾಗಲಿ ಜನರಿಗಾಗಿ ಏನೂ ಮಾಡೇ ಇಲ್ಲ” ಎಂದು ಸರ್ಕಾರದ ವಿರುದ್ದ ಕಿಡಿ ಕಾರಿದರು.

ಸರ್ ಸಚಿವ ಸುಧಾಕರ್ ನಿಮ್ಮ ಮಾತು ಕೇಳುತ್ತಾರೆ ಈ ಕೆಲಸ ಮಾಡಿಸಿ ಎಂದು ಕೇಳಿದ ಗ್ರಾಮಸ್ಥರಿಗೆ ಸಚಿವ ಸುಧಾಕರ್ ನನ್ನ ಮಾತು ಕೇಳುತ್ತಾನೆ ಎಂದು ಯಾರು ಹೇಳಿದ್ದು ? ನನ್ನ ಮಗ ಸುಳ್ಳು ಹೇಳ್ತಾವ್ನೆ… ಅವನು ಮಹಾ ಕಳ್ಳ… ಸಚಿವ ಡಾ.ಸುಧಾಕರ ಬಗ್ಗೆ ನಗು ನಗುತ್ತಲೇ ಅವನು ಸುಳ್ಳ, ಮಹಾಕಳ್ಳ ನಾನೇ ಅವನ್ನ ಎಂಎಲ್ಎ ಮಾಡಿದ್ದು. ಅಲ್ಲಿ ಮಂತ್ರಿ ಆಗೋಕೆ ಹೋಗವ್ನೆ ಅಂತ  ವ್ಯಂಗ್ಯ ಮಾಡಿದ ಸಿದ್ಧರಾಮಯ್ಯ, ಅವನು ನಮ್ಮ ಕೆಲ್ಸ ಮಾಡಬೇಕಲ್ಲಪ್ಪ ಮಾರಾಯ. ಈ ಬಗ್ಗೆ ಪತ್ರ ಬರೆದಿದ್ದೆನೆ ಮಾಡಿಸಿ ಕೊಡ್ತೆನೆ ಎಂದು ಭರವಸೆ ನೀಡಿದರು.

ಅರ್ಕಾವತಿ ಪ್ರಕರಣ ತೆಗೆದರೆ ಕಳ್ಳ-ಸುಳ್ಳ ಯಾರು ಗೊತ್ತಾಗುತ್ತೆ ಎಂಬ ಸಿ ಟಿ ರವಿ ಹೇಳಿಕೆಗೆ ತಿರುಗೇಟು ನೀಡಿ, ಇಷ್ಟುದಿನ ಯಾಕೆ ಸುಮ್ಮನಿದ್ರು ? ಇವರ(ಬಿಜೆಪಿ) ಗೊಡ್ಡು ಬೆದರಿಕೆಗಳಿಗೆ ಹೆದರೋರಲ್ಲ ನಾವು. ಮೂರು ವರ್ಷಗಳಿಂದ ಇವರದ್ದೇ ಸರ್ಕಾರ ಇತ್ತಲ್ಲ ಏನು ಮಾಡಿದರು. ಅವರಿಗೆ ನನ್ನ ಕಂಡ್ರೆ ಭಯ ಎಂದು ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next