ದೊಡ್ಡ ಮನುಷ್ಯ ಅಲ್ಲ. ಮುಂಚಿನಿಂದ ಆ ಮನುಷ್ಯನನ್ನು ಹತ್ತಿರದಿಂದ ನೋಡಿದವರಿಗೆ ಅವರ ಎಲ್ಲಾ ಗುಣಗಳೂ ಗೊತ್ತಿವೆ. ಇಂತಹ ವರ್ತನೆ ತೋರಿದ್ದರಿಂದಲೇ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನ ಸೋಲಿಸಿದರು’ ಎಂದು ಕುಟುಕಿದರು.
Advertisement
“ಸಂಸ್ಕಾರ ಕಲಿಯುತ್ತೇನೆ’ಬೆಂಗಳೂರು: ತಮಗೆ ಸಂಸ್ಕೃತಿ ಇಲ್ಲ ಎಂದು ಟೀಕಿಸಿದ್ದ ಬಿ. ಶ್ರೀರಾಮುಲು ಅವರಿಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಶ್ರೀರಾಮುಲು ಅವರು ಸುಸಂಸ್ಕೃತ ರಾಗಿದ್ದು ಅವರಿಂದ ಸಂಸ್ಕಾರ ಕಲಿಯುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಪಕ್ಷದ ಕಾರ್ಯಕರ್ತೆಯ ಜೊತೆಗೆ ನಡೆದ ಘಟನೆ ದೊಡ್ಡ ವಿಷಯವೇ ಅಲ್ಲ. ಆದರೆ, ಬಿಜೆಪಿಯವರು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶ್ರೀರಾಮುಲು ಹಾಗೂ ಬಿಜೆಪಿಯವರು ಸಂಸ್ಕೃತಿಯ ಪಾಠ ಹೇಳಿದರೆ, ಅವರ ಬಳಿ ಪಾಠ ಹೇಳಿಸಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.