Advertisement

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರೂ ದಡ್ಡರು: ಹೆಚ್.ವಿಶ್ವನಾಥ್

02:27 PM Oct 11, 2021 | Team Udayavani |

ಮೈಸೂರು: ಯಡಿಯೂರಪ್ಪನವರನ್ನು ಓಲೈಸಿದರೆ ವೀರಶೈವ ಮತಗಳು ಬರುತ್ತವೆಂದು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಯೋಚನೆ ಮಾಡುತ್ತಿದ್ದಾರೆ. ಆದರೆ ವೀರಶೈವ ಸಮಾಜ ಅತ್ಯಂತ ಬುದ್ದಿವಂತ ಸಮಾಜ. ಯಡಿಯೂರಪ್ಪನ ಪರ ಮಾತನಾಡಿದರೆ ಓಟ್ ಸಿಗುತ್ತೆ ಎಂದುಕೊಂಡರೆ ನೀವು ದಡ್ಡರು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರೂ ದಡ್ಡರು ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್ ವೈ ಆಪ್ತರ ಮೇಲೆ ಐಟಿ ರೈಡ್ ಹಿನ್ನೆಲೆಯಲ್ಲಿ ರಾಜಕೀಯ ಉದ್ದೇಶದಿಂದ ಐಟಿ ರೈಡ್ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಈ ಹಿಂದೆ ಯಡಿಯೂರಪ್ಪ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನೀವೇ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಿರಿ! ಈಗ ಇದ್ದಕ್ಕಿದ್ದ ಹಾಗೆಯೇ ಅವರ ಪರ ಮೊಸಳೆ ಕಣ್ಣೀರು ಹಾಕುತ್ತಿದ್ದೀರಿ. ಈಗ ಯಡಿಯೂರಪ್ಪನ ಮೇಲೆ ಹುಸಿ ಪ್ರೇಮ ತೋರಿಸುತ್ತಿದ್ದೀರಿ. ಇಂತಹ ಹೇಳಿಕೆಗಳಿಂದ ಯಾರಿಗೂ ಲಾಭ ಇಲ್ಲ. ಕಾಂಗ್ರೆಸ್ ಗೂ ಲಾಭ ಇಲ್ಲ, ಜೆಡಿಎಸ್ ಗೂ ಲಾಭ ಇಲ್ಲ, ಬಿಜೆಪಿಗೆ ನಷ್ಟ ಅಂತೂ ಇಲ್ವೇ ಇಲ್ಲ ಎಂದರು.

ಇದನ್ನೂ ಓದಿ:ಪೋಕ್ಸೋ ಅಡಿ 3 ಮಕ್ಕಳ ತಂದೆ ಅರೆಸ್ಟ್: ವಿದ್ಯಾರ್ಥಿನಿಗೆ ಬೆದರಿಸಿ, ಅಪಹರಿಸಿ ಅತ್ಯಾಚಾರ ಆರೋಪ

ಸ್ವತಃ ಐಟಿ ದಾಳಿಯನ್ನು ಯಡಿಯೂರಪ್ಪನವರೇ ಸ್ವಾಗತಿಸಿದ್ದಾರೆ. ಇದರಲ್ಲಿ ನಿಮ್ಮದೇನು ಕೊಸರು.? ಇದರಲ್ಲಿ ರಾಜಕೀಯ ಮಾಡುವಂತಹದ್ದು ಬೇಡ‌. ಹಾಗಾದರೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭ್ರಷ್ಟಾಚಾರದ ಪರವೇ ಎಂದು ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ವಿಶ್ವನಾಥ್ ಪ್ರಶ್ನೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next