Advertisement

ಸಿದ್ದು ಬಾದಾಮಿ ಬಿಟ್ಟರೆ ಅವರ ಮನೆ ಮುಂದೆ ವಿಷ ಸೇವಿಸ್ತೇವೆ

08:08 PM Nov 10, 2022 | Team Udayavani |

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಬಾದಾಮಿ ಕ್ಷೇತ್ರ ಬಿಟ್ಟು, ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಬಾರದು. ಒಂದು ವೇಳೆ ನಮ್ಮ ಕ್ಷೇತ್ರ ಬಿಡಲು ಮುಂದಾದರೆ ಅವರ ನಿವಾಸಕ್ಕೆ ತೆರಳಿ ವಿಷ ಕುಡಿಯುತ್ತೇವೆ ಎಂದು ಬಾದಾಮಿ ಮತ್ತು ಗುಳೇದಗುಡ್ಡ ಬ್ಲಾಕ್‌ ಕಾಂಗ್ರೆಸ್‌ ಪ್ರಮುಖರು ಆಗ್ರಹಿಸಿದ್ದಾರೆ.

Advertisement

ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಬಾದಾಮಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಣಮಂತಗೌಡ ಯಕ್ಕಪ್ಪನವರ, ಗುಳೇದಗುಡ್ಡ ಬ್ಲಾಕ್‌ ಅಧ್ಯಕ್ಷ ಸಂಜೀವ ಬರಗುಂಡಿ, ಪ್ರಮುಖರಾದ ಹೊಳಬಸು ಶೆಟ್ಟರ, ಎಂ.ಬಿ. ಹಂಗರಗಿ ಮುಂತಾದವರು ಮಾತನಾಡಿ, ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ನಾಲ್ಕೂವರೆ ವರ್ಷದಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಕೋಟಿ ಅನುದಾನ ತಂದಿದ್ದಾರೆ. ಬಾದಾಮಿ ಮತ್ತು ಇತರೆ 18 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಗೆ 230 ಕೋಟಿ, ಕೆರೂರ ಏತ ನೀರಾವರಿ ಯೋಜನೆಗೆ 550 ಕೋಟಿ, ರಸ್ತೆ, ಚರಂಡಿ, ಕೆರೆಗೆ ನೀರು ತುಂಬುವ ಯೋಜನೆ ಸೇರಿ ಹಲವಾರು ಯೋಜನೆ ಕೈಗೊಂಡಿದ್ದಾರೆ. ಇನ್ನೂ ಸುಮಾರು 2 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ 30 ವರ್ಷಗಳ ಮುಂದೆ ಬಂದಿದ್ದೇವೆ. ಅವರೇ ನಮ್ಮ ಕ್ಷೇತ್ರದಿಂದ ಪುನಃ ಸ್ಪರ್ಧಿಸಬೇಕು. ಯಾವುದೇ ಕಾರಣಕ್ಕೂ ಕ್ಷೇತ್ರ ಬಿಡಬಾರದು. ಬಿಟ್ಟರೆ ನಾವು ಬೆಂಗಳೂರಿನ ಅವರ ನಿವಾಸದ ಎದುರು ಧರಣಿ ಕೂಡುತ್ತೇವೆ. ಸಂದರ್ಭ ಬಂದರೆ ವಿಷ ಕುಡಿಯಲೂ ಹಿಂಜರಿಯುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next