Advertisement

ಸಿದ್ದಾಪುರ: ವ್ಯಕ್ತಿಗೆ ಕೋಳಿ ಕತ್ತಿಯಿಂದ ಇರಿತ, ದೂರು…ಪ್ರತಿದೂರು

09:24 PM Jan 08, 2023 | Team Udayavani |

ಸಿದ್ದಾಪುರ: ಸಿದ್ದಾಪುರ ದುರ್ಗಾ ಬೇಕರಿ ಮಾಲಕ ರಾಘವೇಂದ್ರ ಶೆಟ್ಟಿ (42) ಅವರಿಗೆ ಆಜ್ರಿ ಗ್ರಾಮದ ಚೌಕುಳಮಕ್ಕಿ ಶರತ್‌ ಪೂಜಾರಿ, ಶ್ರೀಕಾಂತ ಶೆಟ್ಟಿಯೊಂದಿಗೆ ಬೈಕ್‌ನಲ್ಲಿ ಬಂದು ಕೋಳಿ ಕತ್ತಿಯಿಂದ ಇರಿದಿದ್ದಾರೆ. ಗಾಯಗೊಂಡ ರಾಘವೇಂದ್ರ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಪ್ರಕರಣ: ರಾಘವೇಂದ್ರ ಶೆಟ್ಟಿ ಅವರ ಪತ್ನಿ ಪ್ರತಿಮಾ ಶೆಟ್ಟಿ ಅವರಿಗೆ ಆರೋಪಿ ಶರತ್‌ ಪೂಜಾರಿ ಪದೇ ಪದೇ ದೂರವಾಣಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಇದಕ್ಕೆ ರಾಘವೇಂದ್ರ ಶೆಟ್ಟಿ ಆಕ್ಷೇಪಿಸಿದರೂ, ಆರೋಪಿ ಕರೆ ಮಾಡುವುದನ್ನು ನಿಲ್ಲಸಿರಲಿಲ್ಲ. ಒಂದು ವಾರದ ಹಿಂದೆ ಬೇಕರಿಯ ಬಳಿ ಬಂದು, ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿದರು. ಊರಿನ ಹಿರಿಯರ ಮೂಲಕ ರಾಜಿ ಪಂಚಾಯತಿ ಮಾಡಿಸಿದರು. ಆರೋಪಿ ಶರತ್‌ ಪೂಜಾರಿ ಜ. 6ರಂದು ಪ್ರಕಾಶ ಶೆಟ್ಟಿ ಅವರ ಮೊಬೈಲಿಗೆ ಕರೆ ಮಾಡಿ, ನಿನ್ನ ಅಕ್ಕ ಮತ್ತು ಭಾವನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ರಾತ್ರಿ 10ರ ಸಮಯದಲ್ಲಿ ಬೇಕರಿ ಬಳಿಗೆ ಬಂದು ರಾಘವೇಂದ್ರ ಶೆಟ್ಟಿ ಅವರಿಗೆ ಕೋಳಿ ಕತ್ತಿ ಇರಿದರು. ತಪ್ಪಿಸಿಕೊಂಡಿದ್ದರಿಂದ ರಾಘವೇಂದ್ರ ಶೆಟ್ಟಿ ಅವರ ಕಾಲಿನ ಮೊಣಗಂಟಿಗೆ ತಾಗಿದೆ.

ಪ್ರತಿದೂರು: ರಾಘವೇಂದ್ರ ಶೆಟ್ಟಿ ಹಾಗೂ ಪ್ರತಿಮಾ ಅವರೊಂದಿಗೆ ನನ್ನ ಹಣದ ವ್ಯವಹಾರ ಇದೆ. ಪ್ರತಿಮಾ ಅವರಿಗೆ 2ಲಕ್ಷ ರೂ. ನೀಡಿದ್ದೇನೆ. ಹಣ ಕೇಳಲು ಮೊಬೈಲ್‌ ಕರೆ ಮಾಡಿದ್ದೇನೆ. ಹಣ ಕೊಟ್ಟಿರಲಿಲ್ಲ. ಜ. 6ರ ರಾತ್ರಿ ಪ್ರಕಾಶ ಶೆಟ್ಟಿ ಮೊಬೈಲ್‌ ಕರೆ ಮಾಡಿ, ಬೇಕರಿ ಹತ್ತಿರ ಬಾ ಎಂದು ಕರೆ ಮಾಡಿ ಬೆದರಿಕೆ ಹಾಕಿದ್ದರು. ಆ ಸಮಯದಲ್ಲಿ ಬೇಕರಿ ಬಳಿಗೆ ಸ್ನೇಹಿತ ಶ್ರೀಕಾಂತ ಶೆಟ್ಟಿ ಅವರೊಂದಿಗೆ ಹೋದಾಗ, ರಾಘವೇಂದ್ರ ಶೆಟ್ಟಿ ಮತ್ತು ಪ್ರಕಾಶ ಶೆಟ್ಟಿ ಇಬ್ಬರು ತನ್ನ ಬಳಿ ಇದ್ದ ಕೋಳಿ ಕತ್ತಿಯನ್ನು ಕಸಿದು ಕೈಗೆ ಚುಚ್ಚಿದ್ದಾರೆ ಎಂದು ಆಜ್ರಿ ಗ್ರಾಮದ ಚೌಕುಳಮಕ್ಕಿ ಶರತ್‌ ಪೂಜಾರಿ(29) ಅವರು ಪ್ರತಿದೂರು ನೀಡಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದೇಶದ ಪ್ರತಿಯೊಬ್ಬರೂ ತನ್ನನ್ನು ಆರಾಧಿಸಬೇಕೆಂದು ಮೋದಿ ಬಯಸುತ್ತಾರೆ; ರಾಹುಲ್ ಗಾಂಧಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next