Advertisement

ಸಿದ್ದಾಪುರ : ಗುತ್ತಿಗೆ ನೀಡುವುದಾಗಿ ಲಕ್ಷಾಂತರ ರೂಪಾಯಿ ವಂಚನೆ

11:16 PM Jul 02, 2022 | Team Udayavani |

ಸಿದ್ದಾಪುರ : ಬೆಂಗಳೂರಿನ ಶ್ರೀರಾಮಪುರದ ಜಕೂರು ಚಂದ್ರಪ್ಪ (50) ತಮ್ಮ ಸಂಸ್ಥೆಯಾದ ಭದ್ರಾ ಪವರ್‌ ಪ್ರಾಜೆಕ್ಟ್ ಮತ್ತು ಕಾರ್ಗಲ್‌ ಪ್ರಾಜೆಕ್ಟ್ ಅನ್ನು ಗುತ್ತಿಗೆಗೆ ವಹಿಸಿಕೊಡುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಶಂಕರನಾರಾಯಣ ಗ್ರಾಮದ ಸಂತೋಷ್‌ ಕುಮಾರ್‌ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಚಂದ್ರಪ್ಪ ಅವರು ತಮ್ಮ ಸಂಸ್ಥೆಯಾದ ಭದ್ರಾ ಪವರ್‌ ಪ್ರಾಜೆಕ್ಟ್ ಮತ್ತು ಕಾರ್ಗಲ್‌ಪ್ರಾಜೆಕ್ಟ್ ಅನ್ನು 2017ರಲ್ಲಿ 43 ಲಕ್ಷ ರೂ. ಮೊತ್ತಕ್ಕೆ ಗುತ್ತಿಗೆಗೆ ವಹಿಸಿಕೊಡುವುದಾಗಿ 18,50,000 ರೂ. ಹಣ ಪಡೆದುಕೊಂಡಿದ್ದರು. ಅನಂತರ ಗುತ್ತಿಗೆ ನೀಡದೆ ಮೊಸ ಮಾಡಿದ್ದರು. ಕೊಟ್ಟ ಹಣ ಹಿಂದಿರುಗಿಸುವಂತೆ ಕೇಳಿದಾಗ 1 ಲಕ್ಷ ರೂ. ಹಣ ಮಾತ್ರ ಹಿಂದಿರುಗಿಸಿದ್ದಾರೆ. ಉಳಿದ 17,50,000 ರೂ. ಹಣ ಹಿಂದಿರುಗಿಸದೆ ಮೊಸ ಮಾಡಿದ್ದಾರೆ ಎಂದು ದೂರಿನಲ್ಲಿ ಸಂತೋಷ್‌ ಕುಮಾರ ಶೆಟ್ಟಿ ತಿಳಿಸಿದ್ದಾರೆ. ಸಂತೋಷ್‌ ಕುಮಾರ ಶೆಟ್ಟಿ ಅವರು ಪಿಡಬ್ಲ್ಯುಡಿ ಗುತ್ತಿಗೆದಾರರಾಗಿದ್ದು, ಶಂಕರನಾರಾಯಣದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಹಾರ್ಡವೇರ್‌ ಅಂಗಡಿ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮಧ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್ ಗೆ ಬೈಕ್ ಢಿಕ್ಕಿ: ಯುವಕ ಸ್ಥಳದಲ್ಲೇ ಸಾವು

Advertisement

Udayavani is now on Telegram. Click here to join our channel and stay updated with the latest news.

Next