Advertisement

Siddapura: ಅಂಪಾರು ಮನೆಯಲ್ಲಿ ಕಳ್ಳತನ; ಪ್ರಕರಣ ದಾಖಲು

08:46 PM Oct 23, 2024 | Team Udayavani |

ಸಿದ್ದಾಪುರ: ಅಂಪಾರು ಗ್ರಾಮದ ಅಕ್ಕಯ್ಯ ಅವರ ಮನೆಯಲ್ಲಿ ಕಳ್ಳರು ಅ. 10ರಿಂದ 21ರ ಮಧ್ಯೆ ಕಳ್ಳತನವಾದ ಘಟನೆಯ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅಕ್ಕಯ್ಯ ಅವರು ತಮ್ಮ ಮಗಳೊಂದಿಗೆ ಅ. 10ರಂದು ಮನೆಯಿಂದ ಹೋರ ಹೋದವರು, ಅ. 21ರಂದು ಮನೆಗೆ ವಾಪಸು ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕಳ್ಳರು ಮನೆಯ ಎದುರಿನ ಬೀಗ ಒಡೆದು ಒಳ ನುಗ್ಗಿದ್ದಾರೆ. ಮನೆಯ ಎದುರು ಕೋಣೆಯಲ್ಲಿದ್ದ 5 ದೇವರ ಕಾಣಿಕೆ ಡಬ್ಬಿಯಲ್ಲಿನ ಕಾಣಿಕೆ, 2 ಮೊಬೈಲು ಮತ್ತು ಚಾರ್ಜರನ್ನು ಕಳ್ಳತನ ಮಾಡಿದ್ದಾರೆ. ಮತ್ತೂಂದು ಕೋಣೆಯ ಕಬ್ಬಿಣದ ಕಪಾಟಿನ ಲಾಕ್‌ ಅನ್ನು ಮುರಿದು ಹಾನಿಕೊಳ್ಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next