Advertisement

ಸಿದ್ದಾಪುರ : ಮಸೀದಿಯ ಎರಡು ಗುಂಪುಗಳ ನಡುವೆ ಮತ್ತೆ ಘರ್ಷಣೆ

10:00 PM Nov 11, 2022 | Team Udayavani |

ಸಿದ್ದಾಪುರ : ತಾಲೂಕಿನ ಅರೇಂದೂರು ಗ್ರಾಮದ ಮಸೀದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕುರಿತು ಇತ್ತೀಚಿಗೆ ಗಲಾಟೆ ಮಾಡಿಕೊಂಡು ಎರಡು ಗುಂಪುಗಳಾಗಿ ವೈಷ್ಯಮ್ಯ ಬೆಳೆದಿದ್ದು ಶುಕ್ರವಾರ ಬೆಳಗ್ಗೆ ಮತ್ತೆ ಗಲಾಟೆ ಪ್ರಾರಂಭವಾಗಿ ಹೊಡೆದಾಟ ನಡೆದು ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಎರಡೂ ಗುಂಪಿನವರ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮತ್ತೆ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರಿದಿದೆ.

ಪಟ್ಟಣದ ಬದ್ರಿಯಾ ಜಾಮಿಯ ಮಸೀದಿಯ ಶಾದಿ ಹಾಲ್ ನಲ್ಲಿ ಭಾನುವಾರ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು ಪ್ರಕರಣ ದಾಖಲಾಗಿತ್ತು. ಮಸೀದಿಯ ಶಾದಿ ಹಾಲ್ ನಲ್ಲಿ ಮಸೀದಿ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯ ಸಭೆ ನಡೆದು ಎಲ್ಲರ ಒಮ್ಮತದಿಂದ ಬುಡಾನ್ ಸಾಬ್ ರವರನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು.ನಂತರ ಬುಡನ್ ಸಾಬ್ ರವರು ಕೆಲವು ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಹೇಳಿದಾಗ ಚೀಟಿಯಲ್ಲಿದ್ದ ಹೆಸರುಗಳನ್ನು ಮಸೀದಿಯ ಹಂಗಾಮಿ ಅಧ್ಯಕ್ಷರಾದ ಮುನಾವರ್ ಗುರುಕಾರ್ ರವರು ಓದಲು ಶುರು ಮಾಡಿದಾಗ ಮಸೀದಿಯ ಎರಡು ಗುಂಪುಗಳಲ್ಲಿ ಗಲಾಟೆ ಪ್ರಾರಂಭವಾಗಿ ಹೊಡೆದಾಟ ನಡೆದಿತ್ತು. ಇದೆ ದ್ವೇಷದಲ್ಲಿ ಘರ್ಷಣೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next