Advertisement

ಸಿದ್ಧಗಂಗಾ ಮಠಕ್ಕೆ ಶ್ರೀಗಳು ವಾಪಸ್‌; ಹಳೆ ಮಠದಲ್ಲೇ ಚಿಕಿತ್ಸೆ

12:55 AM Jan 17, 2019 | Team Udayavani |

ತುಮಕೂರು: ಅನಾರೋಗ್ಯದಿಂದಾಗಿ ಇಲ್ಲಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿಗಳನ್ನು ಬುಧವಾರ ಬೆಳಗಿನ ಜಾವ ಮಠಕ್ಕೆ ಸ್ಥಳಾಂತರಿಸಲಾಗಿದೆ.

Advertisement

ಶ್ರೀಗಳ ಅಪೇಕ್ಷೆಯಂತೆ ಮಠಕ್ಕೆ ಕರೆದು ಕೊಂಡು ಬರಲಾಗಿದ್ದು, ಹಳೇ ಮಠದಲ್ಲಿ ಚಿಕಿತ್ಸೆ ಮುಂದುವರಿಯಲಿದೆ. ಸದ್ಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲದೇ ಇರುವುದರಿಂದ ಭಕ್ತರಿಗೆ ಶ್ರೀಗಳ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ.ಜತೆಗೆ ಮಠದ ಸುತ್ತಲೂ ಭಾರೀ ಪೊಲೀಸ್‌ ಬಂದೋಬಸ್ತ್ ಏರ್ಪಡಿಸ ಲಾಗಿದೆ. ಶ್ರೀಗಳ ಆಪ್ತ ವೈದ್ಯ ಪರಮೇಶ್‌ ಮಾತ ನಾಡಿ, ದೂರ ಊರು ಗಳಿಂದ ಶ್ರೀಗಳ ದರ್ಶನಕ್ಕಾಗಿ ಮಠಕ್ಕೆ ಬರ ಬೇಡಿ. ಚಿಕಿತ್ಸೆ ನೀಡಲು ತೊಂದರೆಯಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಡಿ.1ರಿಂದ ಶ್ರೀಗಳ ಆರೋಗ್ಯದಲ್ಲಿ ಏರು ಪೇರಾಗಿ ಬೆಂಗಳೂರು ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮಠಕ್ಕೆ ವಾಪಸ್‌ ಬಂದಮೇಲೆ ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಠದಲ್ಲಿಯೇ ಬಿಜಿಎಸ್‌ ಆಸ್ಪತ್ರೆಯ ವೈದ್ಯ ರಾದ ಡಾ.ರವೀಂದ್ರ, ಡಾ.ವೆಂಕಟರಮಣ ಬಂದು ಚಿಕಿತ್ಸೆ ನೀಡಿದರು. ಆ ನಂತರ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಶಸOಉಚಿಕಿತ್ಸೆ ಮೂಲಕ ಅಳವಡಿಸಿದ್ದ ಸ್ಟೆಂಟ್‌ಗಳನ್ನು ತೆರವುಗೊಳಿಸಿದ್ದರು. ಆನಂತರ ಮಠಕ್ಕೆ ಶ್ರೀಗಳನ್ನು ಕರೆತಂದು ಮಠದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಮತ್ತೆ ತುಮಕೂರಿನ ಸಿದಟಛಿಗಂಗಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.

ಮಠದಲ್ಲೇ ಚಿಕಿತ್ಸೆ: ಶ್ರೀಗಳ ಆರೋಗ್ಯದಲ್ಲಿ ಸ್ಥಿರತೆ ಕಂಡುಬಂದು, ವೈದ್ಯರ ನಿರೀಕ್ಷೆಯಂತೆ ಶ್ರೀಗಳು ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಮುಂದುವರಿಸಲಾಗಿತ್ತು. ಶ್ರೀಗಳು ಮಠಕ್ಕೆ ಹೋಗಬೇಕೆಂದು ಸೂಚನೆ ನೀಡುತ್ತಿದ್ದರು. ಈ ಸಂಬಂಧವಾಗಿ ಮಠದ ಆಡಳಿತ ಮಂಡಳಿ, ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮಿ ಮತ್ತು ಜಿಲ್ಲಾಧಿಕಾರಿಗಳೊಂ ದಿಗೆ ಮಾತುಕತೆ ನಡೆಸಿ, ಶ್ರೀಗಳ ಅಪೇಕ್ಷೆಯಂತೆ ಶ್ರೀಗಳನ್ನು ಸಿದಟಛಿಗಂಗಾ ಮಠಕ್ಕೆ ಸ್ಥಳಾಂತರ ಮಾಡಿದ್ದು, ಶ್ರೀಗಳಿಗೆ ಮಠದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ.

ಆರೋಗ್ಯ ಸ್ಥಿರ: ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಶ್ರೀಗಳ ಆಪ್ತವೈದ್ಯ ಡಾ. ಪರಮೇಶ್‌
ಸ್ವಾಮೀಜಿಯವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಆರೋಗ್ಯ ಸ್ಥಿರವಾಗಿದೆ ಎಂದರು. ಶ್ರೀಗಳಲ್ಲಿ ಕಂಡುಬಂದಿದ್ದ ಸೋಂಕು ಕಡಿಮೆಯಾಗಿದೆ. ಇನ್ನೆರಡು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಮಠಕ್ಕೆ ಕರೆತರಲು ಉದ್ದೇಶಿಸಲಾಗಿತ್ತು. ಆದರೆ, ಸ್ವಾಮೀಜಿ ಮಂಗಳವಾರ ರಾತ್ರಿಯೇ ಮಠಕ್ಕೆ ಹಿಂದಿರುಗುವ ಇಂಗಿತ ವ್ಯಕ್ತಪಡಿಸಿದ್ದರಿಂದ ಬುಧವಾರ ಬೆಳಗಿನ ಜಾವ 4ಗಂಟೆಗೆ ಶ್ರೀಗಳನ್ನು ಮಠಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಶ್ರೀಗಳ ನಾಡಿ ಮಿ ಡಿತ ಸಹ ಜ ಆಗಿಯೇ ಇದೆ. ಆದರೆ, ಶ್ವಾಸಕೋಶದಲ್ಲಿ ನೀರು ಬರುವುದು ನಿಂತಿಲ್ಲ ಎಂದರು.

Advertisement

ಮಠಕ್ಕೆ ಗಣ್ಯರ ಭೇಟಿ: ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ವಿ. ಸೋಮಣ್ಣ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ಹೋಗ ಬೇಕೆಂದು ಒತ್ತಡ ಹಾಕಿದ್ದರಿಂದ ಮಠಕ್ಕೆ ಶಿಫ್ಟ್ ಮಾಡಲಾಗಿದೆ ಎಂದರು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದ ರಾಮಯ್ಯ ಯದುವೀರ ಒಡೆಯರ್‌, ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಹಾಗೂ ಹಲವಾರು ಗಣ್ಯರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಶ್ರೀಗಳು ಚೇತರಿಕೆ
ಕಾಣುತ್ತಿದ್ದಾರೆ. ದೂರ ದೂರದ ಊರುಗಳಿಂದ ಭಕ್ತರು ಯಾರೂ ಬರಬಾರದು. ಇಲ್ಲಿಗೆ ಬಂದು ಶ್ರೀಗಳ ದರ್ಶನ ವಾಗಲಿಲ್ಲ ಎಂದು ಬೇಸರ ಮಾಡಿಕೊಳ್ಳ ಬಾರದು. ಶ್ರೀಗಳು ಅದನ್ನೇ ಹೇಳುತ್ತಾರೆ. ಶ್ರೀಗಳ ಚೇತರಿಕೆ ಯಾದ ಮೇಲೆ ಎಲ್ಲರಿಗೂ ದರ್ಶನಕ್ಕೆ ಅವಕಾಶ ನೀಡುತ್ತೇವೆ. ಇಲ್ಲಿ ಹೆಚ್ಚು ಭಕ್ತರು ಬಂದರೆ ತೊಂದರೆ ಯಾಗುತ್ತದೆ.
● ಡಾ. ಪರಮೇಶ್‌, ಶ್ರೀಗಳ ಆಪ್ತವೈದ್ಯ

Advertisement

Udayavani is now on Telegram. Click here to join our channel and stay updated with the latest news.

Next