Advertisement

ಕನ್ನಡದ ಮತ್ತೊಂದು ಗೀತೆಗೆ ಧ್ವನಿಯಾದ ಸಿದ್ ಶ್ರೀರಾಮ್

04:31 PM Feb 02, 2023 | Team Udayavani |

ಇ.ವಿ. ಗಣೇಶ್‌ ಬಾಬು ನಿರ್ದೇಶನದ “ಮಂಚ’ ಚಿತ್ರದ “ದೇಗುಲದಿ…’ ಎಂಬ ಲಿರಿಕಲ್‌ ಹಾಡು ಇದೀಗ ಯೂ-ಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. “ಜಗವೇ ನೀನು’ ಖ್ಯಾತಿಯ ಸಿದ್‌ ಶ್ರೀರಾಮ್‌ ಈ ಹಾಡಿಗೆ ಧ್ವನಿಯಾಗಿದ್ದು, “ಪುಷ್ಪ’ ಚಿತ್ರದ ಜನಪ್ರಿಯ ಗೀತೆ “ಶ್ರೀವಳ್ಳಿ’ ಹಾಡಿಗೆ ಕನ್ನಡ ಸಾಹಿತ್ಯ ಬರೆದಿದ್ದ ವರದರಾಜ ಚಿಕ್ಕಬಳ್ಳಾಪುರ, ಈ ಹಾಡಿಗೂ ಸಾಹಿತ್ಯ ರಚಿಸಿದ್ದಾರೆ.

Advertisement

“ಮಂಚ’ ಎಂಬ ಹೆಸರೇ ಹೇಳುವಂತೆ, ಈ ಚಿತ್ರವು ಒಂದು ಪ್ರತಿಷ್ಠಿತ ಕುಟುಂಬದ ಮೂರು ತಲೆಮಾರಿನವರು ಉಪಯೋಗಿಸಿದ ಒಂದು ಮಂಚದ ಸುತ್ತ ಸಾಗುತ್ತದೆ. ಜನ ಹೇಗೆ ತಮ್ಮ ಸಂಪ್ರದಾಯ ಮತ್ತು ಗುರುತುಗಳನ್ನು ಕ್ರಮೇಣ ಮರೆಯುತ್ತಿದ್ದಾರೆ ಎಂದು ಹೇಳುವ ಪ್ರಯತ್ನ ಮಾಡಿರುವ ಈ ಚಿತ್ರವು ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಗೊಂಡು, ಕೆಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

“ಮಂಚ’ ಒಂದು ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು ತಮಿಳಿನಲ್ಲಿ ನಿರ್ಮಾಣಗೊಂಡು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಿಗೆ ಡಬ್‌ ಆಗಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸದ್ಯ ಬಿಡುಗಡೆಯಾಗಿರುವ ಈ ಹಾಡನ್ನು ನಾಲ್ಕೂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಹಿಂದೆ “ಅಮೃತವರ್ಷಿಣಿ’ ಚಿತ್ರದ ಹಾಡುಗಳನ್ನು ಸಂಯೋಜಿಸಿದ್ದ ಸಂಗೀತ ನಿರ್ದೇಶಕ ದೇವ ಅವರ ಪುತ್ರ ಶ್ರೀಕಾಂತ್‌ ದೇವ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇ.ವಿ. ಗಣೇಶ್‌ ಬಾಬು ಈ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಂದ್ದಾರೆ.

ನಾಯಕಿಯಾಗಿ ಸೃಷ್ಟಿ ದಂಗೆ ಅಭಿನಯಿಸಿದ್ದು, ಮಿಕ್ಕಂತೆ ವಿದಾರ್ಥ್ (ಅತಿಥಿ ಪಾತ್ರ), ಮಾಸ್ಟರ್‌ ನಿಧೀಶ್‌, ಗೀತಾ ಕೈಲಾಸಂ, ಇಂದಿರಾ ಸೌಂರ್ದ ರಾಜನ್‌, ಸಂಪತ್‌ ರಾಮ್, ಸಮ್ಮಾಲರ್‌ ಅಣ್ಣಂ ಮುಂತಾದವರು ತಾರಾಬಳಗದಲ್ಲಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next