Advertisement

ಸಿಯಾಚಿನ್‌ ಪ್ರವಾಸೋದ್ಯಮಕ್ಕೆ ಮುಕ್ತಾವಕಾಶ : ರಾಜ್‌ನಾಥ್‌ ಸಿಂಗ್‌

10:02 AM Oct 22, 2019 | Hari Prasad |

ಹೊಸದಿಲ್ಲಿ: ವಿಶ್ವದ ಅತಿ ಎತ್ತರ ಯುದ್ಧಭೂಮಿ ಆಗಿರುವ ಭಾರತದ ಸಿಯಾಚಿನ್‌ ಗ್ಲೇಸಿಯರ್‌ ಪ್ರದೇಶದ ಬಾಗಿಲನ್ನು ಪ್ರವಾಸಿಗರಿಗೆ ತೆರೆಯಲಾಗಿದ್ದು, ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

Advertisement

ಲಡಾಖ್‌ನಲ್ಲಿ  ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶಿಯೋಕ್‌ ಸೇತುವೆ ಉದ್ಘಾಟನೆ ಸಂದರ್ಭಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಪ್ರವಾಸೋದ್ಯಮದ ಕ್ಷೇತ್ರದಲ್ಲಿ ಲಡಾಖ್‌ ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಪ್ರವಾಸೋದ್ಯಮವನ್ನು ವೃದ್ದಿಸುವ ನಿಟ್ಟಿನಲ್ಲಿ ಇದೀಗ  ಸಿಯಾಚಿನ್‌ ಪ್ರದೇಶವನ್ನು ಪ್ರವಾಸಿಗರಿಗೆ ತೆರವುಗೊಳಿಸಿದ್ದು, ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ. ಸಿಯಾಚಿನ್‌ ಬೇಸ್‌ ಕ್ಯಾಪ್‌ನಿಂದ ಕುಮಾರ್‌ ಪೋಸ್ಟ್‌ ವರೆಗಿನ ಪ್ರದೇಶವನ್ನು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ತೆರೆವುಗೊಳಿಸಲಾಗಿದೆ ಎಂದು ರಾಜನಾಥ್‌ ಸಿಂಗ್‌ ತಮ್ಮ ಟ್ವಿಟರ್‌ ಖಾತೆಯ ಮೂಲಕ  ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next