Advertisement

‘ಕಬ್ಜ’ದ ಮಧುಮತಿ ಶ್ರೇಯಾ ಶರಣ್

12:09 PM Mar 13, 2023 | Team Udayavani |

ಸೌಥ್‌ ಇಂಡಿಯಾದ ಜನಪ್ರಿಯ ನಾಯಕ ನಟಿಯರ ಪೈಕಿ ಶ್ರೇಯಾ ಶರಣ್‌ ಕೂಡ ಒಬ್ಬರು. ತನ್ನ ಅಂದ ಮತ್ತು ಅಭಿನಯದ ಎರಡರ ಮೂಲಕವೂ ಸೌಥ್‌ ಸಿನಿದುನಿಯಾದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಶ್ರೇಯಾ ಶರಣ್‌, ಸದ್ಯ “ಕಬ್ಜ’ ಸಿನಿಮಾದ ಮೂಲಕ ಕನ್ನಡದಲ್ಲಿ ಮತ್ತೂಂದು ಗ್ರ್ಯಾಂಡ್‌ ಎಂಟ್ರಿಗೆ ಸಿದ್ಧವಾಗಿದ್ದಾರೆ.

Advertisement

“ಕಬ್ಜ’ ಚಿತ್ರದಲ್ಲಿ ಶ್ರೇಯಾ ಶರಣ್‌ ಮಧುಮತಿ ಎಂಬ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಶ್ರೇಯಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. “”ಕಬ್ಜ’ ಸಿನಿಮಾದಲ್ಲಿ ನನಗೊಂದು ಪ್ರಮುಖ ಪಾತ್ರವಿದೆ. ಈ ಸಿನಿಮಾದಲ್ಲಿ ಮಧುಮತಿ ಎಂಬ ಕ್ಯಾರೆಕ್ಟರ್‌ ನಲ್ಲಿ ಕಾಣಿಸಿಕೊಂಡಿದ್ದೇನೆ. ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿರುವುದರಿಂದ, ನನ್ನ ಕಾಸ್ಟೂಮ್‌, ಲುಕ್‌ ಎಲ್ಲವೂ ಕೂಡ ರೆಟ್ರೋ ಶೈಲಿಯಲ್ಲೇ ಇರುತ್ತದೆ. ಮೊದಲ ಬಾರಿಗೆ ಉಪೇಂದ್ರ, ಸುದೀಪ್‌ ಅವರಂಥ ಸ್ಟಾರ್ ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಒಳ್ಳೆಯ ಅನುಭವ. ನಿರ್ದೇಶಕ ಆರ್‌. ಚಂದ್ರು ಮತ್ತಿ ಟೀಮ್‌ ತುಂಬ ಪ್ಯಾಷನೇಟ್‌ ಆಗಿ “ಕಬ್ಜ’ ಸಿನಿಮಾ ಮಾಡಿದ್ದಾರೆ. “ಕಬ್ಜ’ ಸಿನಿಮಾ ಮತ್ತು ನನ್ನ ಕ್ಯಾರೆಕ್ಟರ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಸಿನಿಮಾ ಮತ್ತು ನನ್ನ ಕ್ಯಾರೆಕ್ಟರ್‌ ಆಡಿಯನ್ಸ್‌ಗೂ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ.

ಹಿಟ್‌ ಲಿಸ್ಟ್‌ ಗೆ ಟ್ರೇಲರ್‌

ಇನ್ನು, “ಕಬ್ಜ’ ಚಿತ್ರ ಮಾ.17ಕ್ಕೆ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆ ಮೂಡಿದೆ. ಪಂಚಭಾಷೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಔಟ್‌ ಅಂಡ್‌ ಔಟ್‌ ಮಾಸ್‌ ಅಂಶಗಳೊಂದಿಗೆ ಮೂಡಿಬಂದಿರುವ ಟ್ರೇಲರ್‌ನಲ್ಲಿ ಸ್ವಾತಂತ್ರ್ಯ, ಬ್ರಿಟಿಷರ ವಿರುದ್ಧದ ಹೋರಾಟ, ತಾಯಿ-ಅಣ್ಣನ ಸೆಂಟಿಮೆಂಟ್‌ ಸೇರಿದಂತೆ ಹಲವು ಸನ್ನಿವೇಶಗಳು ಟ್ರೇಲರ್‌ನಲ್ಲಿ ಮೂಡಿಬಂದಿವೆ. ಇದರ ಜೊತೆಗೆ ಚಿತ್ರದಲ್ಲಿ ಸುದೀಪ್‌ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. “ಕಬ್ಜ’ ಚಿತ್ರದಲ್ಲಿ ಉಪೇಂದ್ರ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿರುವ ಸುಳಿವು ನೀಡಿದ್ದಾರೆ.

ಇದನ್ನೂ ಓದಿ:ಕಾಫಿನಾಡಲ್ಲಿ ‘ದರ್ಗಾ ದಂಗಲ್’; ದರ್ಗಾದೊಳಗೆ ಹಿಂದೂ ದೇವಾಲಯದ ಕುರುಹುಗಳಿರುವುದಾಗಿ ಶಂಕೆ

Advertisement

ಏರ್‌ಫೋರ್ಸ್‌ ಆಫೀಸರ್‌ ಆಗಿ ಹಾಗೂ ರುಂಡ ಚೆಂಡಾಡುವ ಮಾಸ್‌ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದರ ಜೊತೆಗೆ ಚಿತ್ರದ ಹಲವು ಪ್ರಮುಖ ಪಾತ್ರಗಳನ್ನು ಕೂಡಾ ಪರಿಚಯಿಸಿದ್ದಾರೆ. ಒಂದು ಸಾಮ್ರಾಜ್ಯ ಕಟ್ಟೋದು ಕತ್ತಿಯಿಂದಲ್ಲ, ಅದನ್ನು ಹಿಡಿದಿತರುವ ಬಲವಾದ ಕೈಗಳಿಂದ.. ಎಂಬ ಮಾಸ್‌ ಡೈಲಾಗ್‌ ಚಿತ್ರದ ಆ್ಯಕ್ಷನ್‌ ಅಬ್ಬರದ ಸೂಚನೆ ನೀಡಿದೆ.

ಇನ್ನು, ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಟ್ರೇಲರ್‌ ಖದರ್‌ ಹೆಚ್ಚಿಸಿದೆ. ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ನಾಯಕರಾಗಿದ್ದು, ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಯಾ ಶರಣ್‌ ಈ ಸಿನಿಮಾದ ನಾಯಕಿ. ಉಳಿದಂತೆ ತೆಲುಗು, ಹಿಂದಿ ಚಿತ್ರರಂಗದ ಪ್ರಮುಖ ನಟರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ನಟ-ನಟಿಯರು ಟ್ರೇಲರ್‌ ಬಗ್ಗೆ ಮೆಚ್ಚುಗೆ ಸೂಚಿಸಿ ಟ್ವೀಟ್‌ ಮಾಡಿದ್ದಾರೆ. ಸದ್ಯ ಚಿತ್ರತಂಡ ಮುಂಬೈ, ಚೆನ್ನೈ, ಹೈದರಾಬಾದ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next