Advertisement

Uchila Shree Mahalaxmi Temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

01:02 AM Jun 29, 2024 | Team Udayavani |

ಕಾಪು: ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತಾಭಿಮಾನಿಗಳಿಂದ ಹರಕೆ ರೂಪದಲ್ಲಿ ಬಂದಿರುವ ವಿವಿಧ ಬಂಗಾರದ ಒಡವೆಗಳನ್ನು ಒಗ್ಗೂಡಿಸಿ ಸಿದ್ಧಪಡಿಸಲಾದ 400 ಗ್ರಾಂ ತೂಕದ ಲಕ್ಷ್ಮೀ ಸರವನ್ನು ಜೂ. 28ರಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್‌ ಅವರ ಮೂಲಕ ಮಹಾಲಕ್ಷ್ಮೀ ಅಮ್ಮನವರಿಗೆ ಸಮರ್ಪಿಸಲಾಯಿತು.

Advertisement

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್‌, ಪ್ರಮುಖರಾದ ಮೋಹನ್‌ ಬಂಗೇರ, ನಾರಾಯಣ ಸಿ. ಕರ್ಕೇರ, ದಿನೇಶ್‌ ಮೂಳೂರು, ದಿನೇಶ್‌ ಎರ್ಮಾಳು, ದೇಗುಲದ ಪ್ರಬಂಧಕ ಸತೀಶ್‌ ಅಮೀನ್‌ ಪಡುಕೆರೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next