Advertisement

ಐಪಿಎಲ್‌: ಶ್ರೇಯಸ್‌ ಅಯ್ಯರ್‌ ಅನುಮಾನ

11:46 PM Mar 15, 2023 | Team Udayavani |

ಮುಂಬಯಿ: ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಆಸ್ಟ್ರೇಲಿಯ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಅವರು ಬೆನ್ನು ನೋವಿಗೆ ಸಿಲುಕಿದ್ದು, ಇನ್ನೂ ಚೇತರಿಕೆ ಕಂಡಿಲ್ಲ ಎಂಬುದಾಗಿ ಟೀಮ್‌ ಇಂಡಿಯಾದ ಫೀಲ್ಡಿಂಗ್‌ ಕೋಚ್‌ ಟಿ. ದಿಲೀಪ್‌ ಹೇಳಿದರು.

Advertisement

ಈ ಸಮಸ್ಯೆಯಿಂದ ಶ್ರೇಯಸ್‌ ಅಯ್ಯರ್‌ ಅಹ್ಮದಾಬಾದ್‌ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದಿರಲಿಲ್ಲ. ಸದ್ಯ ಅವರು ಬೆಂಗಳೂರಿನ ಎನ್‌ಸಿಎಗೆ ತೆರಳಿದ್ದಾರೆ. ಪ್ರಸಿದ್ಧ್ ಕೃಷ್ಣ, ಜಸ್‌ಪ್ರೀತ್‌ ಬುಮ್ರಾ ಅವರಂತೆ ಅಯ್ಯರ್‌ಗೂ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಏನೇ ಆದರೂ ಐಪಿಎಲ್‌ನ ಮೊದಲಾರ್ಧದಲ್ಲಿ ಕೆಕೆಆರ್‌ಗೆ ಅಯ್ಯರ್‌ ಸೇವೆ ಸಿಗುವುದು ಅನುಮಾನ ಎನ್ನಲಾಗಿದೆ.

ಐಪಿಎಲ್‌ನಲ್ಲಿ ಅಯ್ಯರ್‌ ಕೆಕೆಆರ್‌ ತಂಡದ ನಾಯಕರಾಗಿಯೂ ಆಯ್ಕೆಯಾಗಿದ್ದರು.

ಅಯ್ಯರ್‌ಗೆ ಬೆನ್ನುನೋವು ಸತತ ವಾಗಿ ಕಾಡುತ್ತಲೇ ಇದೆ. ಇದರಿಂದ ಚೇತರಿಕೆ ಕಂಡಿದ್ದರಿಂದಲೇ ಅವರು ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಮರಳಿದ್ದರು. ಆದರೆ ಈ ಪುನರಾಗಮನದ ಸರಣಿಯೇ ಮತ್ತೆ ಕಂಟಕವಾಗಿ ಕಾಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next