Advertisement

ಶ್ರೇಯಸ್ ಈಗ ‘ದಿಲ್ದಾರ್’ ಹೀರೊ..

04:55 PM Apr 01, 2023 | Team Udayavani |

“ರಾಣ’ ಸಿನಿಮಾ ಬಳಿಕ ನಟ ಶ್ರೇಯಸ್‌ ಕೆ. ಮಂಜು ಮತ್ತೂಂದು ಹೊಸ ಸಿನಿಮಾಕ್ಕೆ ತಯಾರಿ ನಡೆಸಿದ್ದಾರೆ. ಈಗಾಗಲೇ ಸದ್ದಿಲ್ಲದೆ ಶ್ರೇಯಸ್‌ ಹೊಸ ಸಿನಿಮಾದ ಕೆಲಸಗಳು ಶುರುವಾಗಿದ್ದು, ಇದೀಗ ಈ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಿದೆ. ಅಂದಹಾಗೆ, ಶ್ರೇಯಸ್‌ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ “ದಿಲ್ದಾರ್‌’ ಎಂದು ಟೈಟಲ್‌ ಇಡಲಾಗಿದ್ದು, ಇತ್ತೀಚೆಗೆ ಸಿನಿಮಾದ ಮುಹೂರ್ತ ನೆರವೇರಿತು.

Advertisement

ನಟ ರವಿಚಂದ್ರನ್‌ “ದಿಲ್ದಾರ್‌’ ಸಿನಿಮಾದ ಟೈಟಲ್‌ ಬಿಡುಗಡೆ ಮಾಡಿ, ಚಿತ್ರೀಕರಣಕೆ  ಕ್ಲಾಪ್‌ ಮಾಡಿದರೆ, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಕ್ಯಾಮೆರಾಗೆ ಚಾಲನೆ ಮಾಡುವ ಮೂಲಕ “ದಿಲ್ದಾರ್‌’ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಮಧು ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ದಿಲ್ದಾರ್‌’ ಸಿನಿಮಾವನ್ನು ಸಂತೋಷ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಅದ್ಧೂರಿ ಲವರ್’ ಹಾಗೂ “ಬ್ಯಾಡ್‌ ಮ್ಯಾನರ್’ ಸಿನಿಮಾದಲ್ಲಿ ಅಭಿನಯಿಸಿರುವ ಪ್ರಿಯಾಂಕಾ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದ್ದು, ಗಗನ್‌ ಗೌಡ ಛಾಯಾಗ್ರಹಣವಿದೆ. “ದಿಲ್ದಾರ್‌’ ಕಾಲೇಜ್‌ ಸ್ಟೋರಿ ಸಿನಿಮಾವಾಗಿದ್ದು, ಬೆಂಗಳೂರು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next