Advertisement

ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನ: ಸೀತಾ ಕಲ್ಯಾಣ, ಲಘು ಪೂರ್ಣಾಹುತಿ

12:31 AM Nov 03, 2022 | Team Udayavani |

ಮೂಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ದ್ವಾದಶ ಕೋಟಿ ಶ್ರೀ ರಾಮನಾಮ ತಾರಕ ಮಂತ್ರ ಜಪ ಯಜ್ಞ ಮಂಗಳಾಚರಣೆ ಮಹೋತ್ಸವದ ಯಜ್ಞ ಮಂಟಪದಲ್ಲಿ ಸೋಮವಾರ ರಾತ್ರಿ ಸೀತಾ ಕಲ್ಯಾಣ, ದೇವರಿಗೆ ಉಯ್ಯಾಲೆಯಲ್ಲಿ ಪೂಜೆ ನೆರವೇರಿತು.

Advertisement

7ನೇ ದಿನ ವೈದಿಕ ತಂಡದಿಂದ ನಡೆದ ಶ್ರೀರಾಮ ಭದ್ರಕಾ ಮಂಡಲ ಪೂಜೆ ಹಾಗೂ ಪ್ರಧಾನ ಹವನ, ಸುಂದರಕಾಂಡ ವಿಹಿತ ಹವನದ ಲಘುಪೂರ್ಣಾಹುತಿ ನಡೆಯಿತು. ಮುಂಜಾನೆ ಕ್ಷೇತ್ರದಲ್ಲಿ ದೇವದರ್ಶನ ಸೇವೆ ಒಳಾವರಣದಲ್ಲಿ ನಡೆಯಿತು. ರಾತ್ರಿ ರಾವಣ ದಹನ, ಬುಧವಾರ ಶ್ರೀರಾಮ ಪಟ್ಟಾಭಿಷೇಕ ನೆರವೇರಿತು.

ಮುಂಜಾನೆಯಿಂದ ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಫಲಾಹಾರ ಹಾಗೂ ಬೋಜನದ ವ್ಯವಸ್ಥೆ ಶಿಸ್ತುಬದ್ಧವಾಗಿ ನಡೆಯುತ್ತಿದೆ.

ನಿತ್ಯವೂ ನೂರಾರು ಭಜಕರು ಭಜನೆಯೊಂದಿಗೆ ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಬರುತ್ತಿದ್ದಾರೆ.ನ. 3ರಂದು ಮಹಾ ಮಂಗಳ್ಳೋ ತ್ಸವದ ಪೂರ್ಣಾಹುತಿಯನ್ನು ಶ್ರೀ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ನೆರವೇರಿಸುವರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next