Advertisement

ಮಂಜೇಶ್ವರ: ದೇವಸ್ಥಾನದಿಂದ ಚಿನ್ನಾಭರಣ ಕಳವು ಪರಾರಿಯಾದ ಅರ್ಚಕನ ಬಂಧನ

05:49 PM Nov 06, 2022 | Team Udayavani |

ಮಂಜೇಶ್ವರ: ಹೊಸಬೆಟ್ಟು ಶ್ರೀ ಮಂಜೇಶ ಶಾಂತದುರ್ಗಾ ದೇವಸ್ಥಾನದಿಂದ ಐದೂವರೆ ಪವನ್‌ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅರ್ಚಕ ತಿರುವನಂತಪುರ ಚಿನ್ನಪ್ಪಳ್ಳಂ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಸಮೀಪದ ಬಾಡಿಗೆ ಮನೆಯಲ್ಲಿ ವಾಸಿಸುವ ಎಸ್‌.ದೀಪಕ್‌ ನಂಬೂದಿರಿ (32)ಯನ್ನು ಮಂಜೇಶ್ವರ ಪೊಲೀಸರು ತಿರುವಂತಪುರದಿಂದ ಬಂಧಿಸಿದ್ದಾರೆ.

Advertisement

ದೇವಸ್ಥಾನದಲ್ಲಿ ಗರ್ಭಗುಡಿಯ ದೇವರ ವಿಗ್ರಹಗಳಿಗೆ ತೊಡಿಸಿದ್ದ ಎರಡು ಸರಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಚಿನ್ನಾಭರಣವನ್ನು ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದು ಅದನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಇದನ್ನು 84 ಸಾವಿರ ರೂ. ಗೆ ಮಾರಾಟ ಮಾಡಿದ್ದನೆಂದು ತನಿಖೆಯಲ್ಲಿ ತಿಳಿದು ಬಂದಿದೆ.

ಚಿನ್ನಾಭರಣಗಳಿಂದ ಹರಳುಗಳನ್ನು ತೆರವುಗೊಳಿಸಿದ ಸ್ಥಿತಿಯಲ್ಲಿತ್ತು. ದೀಪಕ್‌ ನಂಬೂದಿರಿಯನ್ನು ಅ.27 ರಂದು ದೇವಸ್ಥಾನದ ಅರ್ಚಕನನ್ನಾಗಿ ನೇಮಿಸಲಾಗಿತ್ತು. 29 ರಂದು ರಾತ್ರಿಯಿಂದ ನಾಪತ್ತೆಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next