Advertisement

ಶ್ರೀ ಪದ್ಧತಿ ಬೇಸಾಯ: ಚಿಂತನ- ಮಂಥನ

01:50 AM Dec 11, 2018 | Karthik A |

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ಯೋಜನಾ ವ್ಯಾಪ್ತಿಯ ಹಾಲಾಡಿ ವಲಯದ ರಟ್ಟಾಡಿ ಕಾರ್ಯಕ್ಷೇತ್ರದಲ್ಲಿ ಪ್ರಗತಿಪರ ಬೇಸಾಯಗಾರ ರಾಜ ಕುಲಾಲ್‌ ಅವರ ಕೃಷಿ ತಾಕಿನಲ್ಲಿ ಶ್ರೀ ಪದ್ಧತಿ ಬೇಸಾಯದ ಕುರಿತು ಚಿಂತನ ಮಂಥನ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷ ದಿನೇಶ್‌ ಕುಲಾಲ್‌ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು ವಲಯ ಮೇಲ್ವಿಚಾರಕಿ ದಿವ್ಯ ಪ್ರಸನ್ನ ಆಚಾರ್ಯ ನೆರವೇರಿಸಿದರು.

Advertisement

ಸಂಪನ್ಮೂಲ ವ್ಯಕ್ತಿ ಪ್ರಗತಿಪರ ಕೃಷಿಕ ಪ್ರಕಾಶ್‌ ಗೋವಿಂಡೆ, ಶ್ರೀ ಪದ್ಧತಿ ಬೇಸಾಯ ಲಾಭದಾಯಕ ಕ್ರಮವಾಗಿದ್ದು, ಉತ್ತಮ ತಳಿಯ ಬೀಜದ ಆಯ್ಕೆ, ಬೀಜೋಪಚಾರ, ಸಸಿಮಡಿ ಮಾಡುವ ವಿಧಾನ, ಗೊಬ್ಬರ ನಿರ್ವಹಣೆ, ನೀರು ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡಿ, ನಾಟಿಯನ್ನು 12-15 ದಿನಕ್ಕೆ ಮಾಡಿದ ನಂತರ ಕೋನೋವೀಡರ್‌ (ಕಳೆ ನಿರ್ವಹಣಾ ಯಂತ್ರದ) ಬಳಕೆಯನ್ನು ಉತ್ತಮ ರೀತಿಯಲ್ಲಿ ಮಾಡಿದಲ್ಲಿ ಹೆಚ್ಚು ಫಸಲು ದೊರೆತು ಲಾಭಗಳಿಸಲು ಸಾಧ್ಯ ಎಂದರು. ಈ ವೇಳೆ ಶ್ರೀ ಪದ್ಧತಿ ನಾಟಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.

ಯೋಜನೆಯ ಕೇಂದ್ರ ಸಮಿತಿಯ ಮಾಜಿ ಒಕ್ಕೂಟದ ಅಧ್ಯಕ್ಷರಾದ ಸತೀಶ್‌ ಹೆಗ್ಡೆ, ರೈತರಾದ ಚಂದ್ರ ಕುಲಾಲ್‌, ಸಂತೋಷ್‌ ಕುಲಾಲ್‌, ಉಮೇಶ್‌ ಹೆಗ್ಡೆ , ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಕೃಷಿ ಅಧಿಕಾರಿ ಚೇತನ್‌ ಕುಮಾರ್‌ ಪ್ರಸ್ತಾವಿಸಿ, ಸ್ವಾಗತಿಸಿ, ವಿಭಾಗದ ಸೇವಾಪ್ರತಿನಿಧಿ ವೀಣಾ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next