Advertisement

ಶ್ರದ್ಧಾ, ಶಿಲ್ಪಾ ಸ್ನೇಹಿತರು: ಸುಖೇಶ್‌ ಚಂದ್ರಶೇಖರ್‌ ವಂಚನೆ ಪ್ರಕರಣ ರೋಚಕ ತಿರುವು

08:45 PM Dec 19, 2021 | Team Udayavani |

ನವದೆಹಲಿ: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ನವದೆಹಲಿಯ ತಿಹಾರ್‌ ಜೈಲಿನಲ್ಲಿರುವ ವಂಚಕ ಸುಖೇಶ್‌ ಚಂದ್ರಶೇಖರ್‌ ಪ್ರಕರಣ ಪ್ರತಿದಿನ ರೋಚಕ ತಿರುವು ಪಡೆದುಕೊಳ್ಳುತ್ತಿದೆ.

Advertisement

ಇದೀಗ ಪ್ರಕರಣದಲ್ಲಿ ನಟಿಯರಾದ ಶ್ರದ್ಧಾ ಕಪೂರ್‌, ಶಿಲ್ಪಾ ಶೆಟ್ಟಿ ಹಾಗೂ ನಟ ಕಾರ್ತಿಕ್‌ ಆರ್ಯನ್‌ ಹೆಸರೂ ಕೇಳಿಬಂದಿದೆ.

2015ರಿಂದಲೇ ನಟಿ ಶ್ರದ್ಧಾ ಕಪೂರ್‌ ಜೊತೆ ಸ್ನೇಹವಿರುವುದಾಗಿ ಸುಖೇಶ್‌ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳ ಎದುರು ಹೇಳಿಕೊಂಡಿದ್ದಾನೆ.

ಕಾರ್ತಿಕ್‌ ಆರ್ಯನ್‌ ನಟಿಸಿರುವ “ಕ್ಯಾಪ್ಟನ್‌ ಇಂಡಿಯಾ’ ಸಿನಿಮಾಕ್ಕೆ ತಾನು ಸಹ-ನಿರ್ಮಾಪಕನಾಗುವ ಯೋಜನೆ ಹಾಕಿಕೊಂಡಿದ್ದಾಗಿಯೂ ಆತ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ:ಪ್ರೀತಿ ನಿರಾಕರಿಸಿದಕ್ಕೆ ಬೆಂಕಿ ಹಚ್ಚಿ ತಾನೂ ಜೀವ ಕಳೆದುಕೊಂಡ!

Advertisement

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ, ಕುಂದ್ರಾ ಜಾಮೀನು ವಿಚಾರದಲ್ಲಿ ಶಿಲ್ಪಾ ಅವರನ್ನೂ ಸಂಪರ್ಕಿಸಿದ್ದಾಗಿ ಆತ ಹೇಳಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next