Advertisement

ಶ್ರದ್ಧಾ ಕೊಲೆ: ಆಫ್ತಾಬ್‌ ಪೂನಾವಾಲಾನ ಫ್ಲಾಟ್‌ನಿಂದ ಐದು ಚಾಕು ವಶಕ್ಕೆ

10:32 PM Nov 24, 2022 | Team Udayavani |

ನವದೆಹಲಿ: ಶ್ರದ್ಧಾ ಕೊಲೆ ಪ್ರಕರಣ ಸಂಬಂಧ ಆರೋಪಿ ಆಫ್ತಾಬ್‌ ಪೂನಾವಾಲಾನ ನವದೆಹಲಿಯ ಛತರ್ಪುರದಲ್ಲಿನ ಫ್ಲಾಟ್‌ನಿಂದ ಐದು ಚಾಕುಗಳನ್ನು ದೆಹಲಿ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಇವುಗಳನ್ನು ಬಳಸಲಾಗಿ ದೆಯೇ ಎಂಬುದನ್ನು ಪತ್ತೆಹಚ್ಚಲು ಚಾಕು ಗಳನ್ನು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಅಫ್ತಾಬ್‌ ಶ್ರದ್ಧಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಲು ಬಳಸಿರುವ ಗರಗಸ ಈವರೆಗೆ ಸಿಕ್ಕಿಲ್ಲ.

Advertisement

ಸಿಗರೇಟ್‌ನಿಂದ ಸುಟ್ಟಿದ್ದ
“2021ರಲ್ಲಿ ಅಫ್ತಾಬ್‌ ಸಿಗರೇಟ್‌ನಿಂದ ಶ್ರದ್ಧಾಳ ಬೆನ್ನು ಮತ್ತು ಇತರೆ ಭಾಗಗಳನ್ನು ಸುಟ್ಟು ಹಿಂಸೆ ನೀಡಿದ್ದ. ಶ್ರದ್ಧಾ ಈ ವಿಷಯವನ್ನು ತನ್ನ ಆಪ್ತ ವಲಯದ ಮಹಿಳಾ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಳು. ಇದನ್ನು ಕೇಳಿ ನಮಗೆ ಬೇಸರವಾಗಿತ್ತು,’ ಎಂದು ಶ್ರದ್ಧಾ ಸ್ನೇಹಿತ ರಜತ್‌ ಶುಕ್ಲಾ ಗುರುವಾರ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next