Advertisement

ಪುಣೆಯಲ್ಲಿ ಎಲ್ಲರಿಗೂ ಕತ್ತಿ ಖರೀದಿಸಲು ಆಧಾರ್ ಕಡ್ಡಾಯ !!

05:43 PM Feb 02, 2023 | Team Udayavani |

ಪುಣೆ : ಮಹಾರಾಷ್ಟ್ರದ ಪುಣೆಯಲ್ಲಿ ಜನರನ್ನು ಭಯಭೀತಗೊಳಿಸಲು ಮತ್ತು ದಾಳಿ ಮಾಡಲು ಸಮಾಜವಿರೋಧಿಗಳಿಂದ ಕತ್ತಿಯ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಂತಹ ಉಪಕರಣಗಳನ್ನು ಖರೀದಿಸುವವರ ದಾಖಲೆಯನ್ನು ನಿರ್ವಹಿಸುವಂತೆ ಪೊಲೀಸರು ನಗರದ ಕೃಷಿ ಉಪಕರಣಗಳ ಮಾರಾಟಗಾರರಿಗೆ ಸೂಚಿಸಿದ್ದಾರೆ. ಆಧಾರ್ ಕಾರ್ಡ್ ವಿವರಗಳನ್ನು ಗಮನಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

Advertisement

ಅಪ್ರಾಪ್ತ ವಯಸ್ಕರು ಸೇರಿದಂತೆ ದುಷ್ಕರ್ಮಿಗಳು, ಕತ್ತಿ ಗಳೊಂದಿಗೆ ಜನರ ಮೇಲೆ ದಾಳಿ ಮತ್ತು ಭಯಭೀತಗೊಳಿಸುವ ಘಟನೆಗಳು ಹೆಚ್ಚಳ ಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

‘ಕೊಯ್ತಾ ಗ್ಯಾಂಗ್’ ಎಂದು ಕರೆಯಲ್ಪಡುವ ಸದಸ್ಯರು ಅವುಗಳನ್ನು ಝಳಪಿಸುವುದರ ಮೂಲಕ ಜನರನ್ನು ಬೆದರಿಸುತ್ತಿರುವ ಹಲವಾರು ಘಟನೆಗಳು, ವಿಶೇಷವಾಗಿ ಪುಣೆ ನಗರದ ಹೊರವಲಯದಲ್ಲಿರುವ ಪ್ರದೇಶಗಳಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ವರದಿಯಾಗಿದೆ. “ನಾವು ತಮ್ಮ ಪ್ರದೇಶಗಳಲ್ಲಿನ ಕೃಷಿ ಉಪಕರಣಗಳ ಚಿಲ್ಲರೆ ಮಾರಾಟಗಾರರಿಗೆ ಖರೀದಿಯ ಸಮಯದಲ್ಲಿ ಕತ್ತಿಗಳ ಖರೀದಿದಾರರ ರುಜುವಾತುಗಳನ್ನು ದಾಖಲಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲು ವಲಯ ಡಿಸಿಪಿಗಳನ್ನು ಕೇಳಿದ್ದೇವೆ” ಎಂದು ಪೊಲೀಸ್ ಉಪ ಕಮಿಷನರ್ ಅಮೋಲ್ ಝೆಂಡೆ ಹೇಳಿದರು.

ಖರೀದಿದಾರರ ಆಧಾರ್ ಸಂಖ್ಯೆಗಳು ಮತ್ತು ಇತರ ರುಜುವಾತುಗಳಂತಹ ವಿವರಗಳನ್ನು ದಾಖಲಿಸಲು ಸೂಚಿಸಿ, ಕತ್ತಿಗಳ ಚಿಲ್ಲರೆ ಮಾರಾಟಗಾರರಿಗೆ ನೋಟಿಸ್ ನೀಡಲಾಗಿದೆ ಎಂದು ಡಿಸಿಪಿ ಸ್ಮಾರ್ತನ ಪಾಟೀಲ್ ಹೇಳಿದ್ದಾರೆ.

“ಬಾಲಾಪರಾಧಿಗಳು ಕತ್ತಿಗಳನ್ನು ಹೊಂದಿದ್ದು ಮತ್ತು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಬೆದರಿಕೆಯನ್ನು ನಿಗ್ರಹಿಸುವ ಸಲುವಾಗಿ, ನಾವು ಕೆಲವು ಕ್ರಮಗಳನ್ನು ತಂದಿದ್ದೇವೆ, ಇದರಲ್ಲಿ ಖರೀದಿದಾರರ ದಾಖಲೆಯನ್ನು ನಿರ್ವಹಿಸಲು ಮಾರಾಟಗಾರರಿಗೆ ತಿಳಿಸಲಾಗಿದೆ ”ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next