Advertisement

Supreme Court: ಆದೇಶದ ಮೂಲಕ ಶಿಶುವನ್ನು ಕೊಲ್ಲಲ್ಲುಅನುಮತಿ ನೀಡಬೇಕೇ?- ಸುಪ್ರೀಂ ಪ್ರಶ್ನೆ

07:51 PM Oct 12, 2023 | Team Udayavani |

ನವದೆಹಲಿ: 26 ವಾರದ ಗರ್ಭಿಣಿಯಾಗಿದ್ದ ವಿವಾಹಿತ ಮಹಿಳೆಯ ವೈದ್ಯಕೀಯ ಗರ್ಭಪಾತಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಈ ವೇಳೆ ಸಿಜೆಐ ಡಿ.ವೈ.ಚಂದ್ರಚೂಡ್‌, “ಅರ್ಜಿದಾರರು ನ್ಯಾಯಾಲಯದ ಆದೇಶದ ಮೂಲಕ ಶಿಶುವನ್ನು ಕೊಲ್ಲಲು ಅನುಮತಿ ಬಯಸಿದ್ದಾರೆಯೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Advertisement

ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ, ಶುಕ್ರವಾರದ ವಿಚಾರಣೆಗೂ ಮುನ್ನ ಅರ್ಜಿದಾರ ಮಹಿಳೆಯೊಂದಿಗೆ ಮಾತುಕತೆ ನಡೆಸುವಂತೆ ಅರ್ಜಿದಾರರ ಪರ ನ್ಯಾಯವಾದಿಗಳು ಹಾಗೂ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರಿಗೆ ನಿರ್ದೇಶಿಸಿತು. “26 ವಾರಗಳವರೆಗೂ ಮಹಿಳೆ ಏನು ಮಾಡುತ್ತಿದ್ದರು? ಆಕೆಗೆ ಈಗಾಗಲೇ 2 ಮಕ್ಕಳಿವೆ. ಈಗ ಏಕೆ ಗರ್ಭಪಾತಕ್ಕೆ ಮುಂದಾಗಿದ್ದಾರೆ’ ಎಂದು ನ್ಯಾಯಪೀಠ ಪ್ರಶ್ನಿಸಿತು.

“ವೈದ್ಯರ ವರದಿ ಪ್ರಕಾರ, ಪರಿಸ್ಥಿತಿ ತುಂಬ ಸೂಕ್ಷ್ಮವಾಗಿದೆ. ಮಗು ಹುಟ್ಟಲು ಸಿದ್ಧವಾಗಿದೆ. ಭ್ರೂಣವು ಜೀವನದ ಲಕ್ಷಣಗಳನ್ನು ತೋರಿಸುತ್ತಿದೆ. ಹೀಗಾಗಿ ಗರ್ಭಪಾತಕ್ಕೆ ಅವಕಾಶ ನೀಡಬಾರದು’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ವಾದಿಸಿದ್ದಾರೆ. ಮೂರನೇ ಬಾರಿಗೆ ಗರ್ಭ ಧರಿಸಿದ್ದ ಮಹಿಳೆಯು, ತಾನು ಖನ್ನತೆಯಿಂದ ಬಳಲುತ್ತಿದ್ದು, ಭಾವನಾತ್ಮಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ ಮೂರನೇ ಮಗುವನ್ನು ಬೆಳೆಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಈ ಪ್ರಕರಣಕ್ಕೆ ಸಂಬಂಧಸಿದಂತೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠದಿಂದ ಭಿನ್ನ ತೀರ್ಪು ಬಂದಿತು. ಹೀಗಾಗಿ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next