Advertisement

ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕು: ಕಾಂಗ್ರೆಸ್ ನಿಂದ ಬಾಲಕನಿಗೆ ಲ್ಯಾಪ್‌ಟಾಪ್ ಉಡುಗೊರೆ

05:28 PM Nov 11, 2022 | Team Udayavani |

ನಾಂದೇಡ್‌ : ಸಾಫ್ಟ್‌ವೇರ್ ಇಂಜಿನಿಯರ್ ಆಗಲು ಬಯಸಿದ ಮಹಾರಾಷ್ಟ್ರದ ನಾಂದೇಡ್‌ನ ಬಾಲಕನೊಬ್ಬನಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಲ್ಯಾಪ್‌ಟಾಪ್ ಉಡುಗೊರೆಯಾಗಿ ನೀಡಿದರು.

Advertisement

ಗುರುವಾರ ನಡೆದ ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ಯ ಸಂದರ್ಭದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸರ್ವೇಶ್ ಹತ್ನೆ ಎಂಬ ಬಾಲಕನನ್ನು ಭೇಟಿಯಾಗಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂದು ಬಯಸಿದ್ದೇನೆ ಆದರೆ ನನ್ನ ಬಳಿ ಕಂಪ್ಯೂಟರ್ ಇಲ್ಲ ಎಂದು ಸರ್ವೇಶ್ ಹೇಳಿದ್ದಾನೆ.

ತನ್ನ ಶಾಲೆಯಲ್ಲಿ ಕಂಪ್ಯೂಟರ್ ಇಲ್ಲ ಎಂದು ಹುಡುಗ ಗಾಂಧಿ ಅವರ ಬಳಿ ಹೇಳಿಕೊಂಡಿದ್ದು, ಗುರುವಾರ ಸಂಜೆ ಸಮಾವೇಶದಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಅವರು ಸರ್ವೇಶ್ ಅವರ ಭೇಟಿಯನ್ನು ಉಲ್ಲೇಖಿಸಿದ್ದಾರೆ.

ಪಕ್ಷವು ನಂತರ ಸಾಮಾಜಿಕ ಮಾಧ್ಯಮದಲ್ಲಿ ಗಾಂಧಿಯವರು ಸರ್ವೇಶ್ ಮತ್ತು ಅವರ ಸ್ನೇಹಿತನೊಂದಿಗೆ ರಸ್ತೆಯ ಬದಿಯಲ್ಲಿ ಕುಳಿತಿರುವ ವಿಡಿಯೋ ಹಂಚಿಕೊಂಡಿದ್ದು, ಅವರಿಗೆ ತಮ್ಮ ಸ್ವಂತ ಟ್ಯಾಬ್ಲೆಟ್ ಮತ್ತು ಅದನ್ನು ಹೇಗೆ ಬಳಸಬೇಕೆಂದು ತೋರಿಸಿದ್ದಾರೆ.

“ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲಿ ಯುವ ತಂತ್ರಜ್ಞಾನ ಉತ್ಸಾಹಿ ಸರ್ವೇಶ್ ಹತ್ನೆ ಅವರಿಗೆ ಲ್ಯಾಪ್‌ಟಾಪ್ ಹಸ್ತಾಂತರಿಸಿದರು. ಅವರಿಗೆ ಇನ್ನಷ್ಟು ಅನ್ವೇಷಿಸಲು ಸಹಾಯ ಮಾಡಲು ನಮ್ಮ ಕಡೆಯಿಂದ ಒಂದು ಸಣ್ಣ ಗೆಸ್ಚರ್” ಎಂದು ಪಕ್ಷವು ಪೋಸ್ಟ್‌ನಲ್ಲಿ ತಿಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next