Advertisement

ಗಣೇಶ ಪೆಂಡಾಲ್ ಬಿಚ್ಚುವಾಗ ಶಾರ್ಟ್ ಸರ್ಕ್ಯೂಟ್: ಯುವಕ ಸಾವು

10:46 PM Sep 05, 2022 | Team Udayavani |

ಸಿಂಧನೂರು: ಗಣೇಶ ಹಬ್ಬದ ನಿಮಿತ್ತ ಹಾಕಲಾಗಿದ್ದ ಶಾಮೀಯಾನ ಬಿಚ್ಚಲು ಹೋದ ಸಂದರ್ಭ ಯುವಕನೊಬ್ಬ ಸೋಮವಾರ ಕರೆಂಟ್ ತಗುಲಿ ಮೃತಪಟ್ಟಿದ್ದಾನೆ.

Advertisement

ನಗರದ ಪಟೇಲವಾಡಿಯಲ್ಲಿ ಪೆಂಡಾಲ್ ತೆಗೆಯಲು ಹೋಗಿದ್ದ ಕೂಲಿ ಕಾರ್ಮಿಕ ಹನುಮಂತ ತಂದೆ ಗದ್ಯಪ್ಪ‌ ಮೃತ ದುರ್ದೈವಿ.
ಶಾಮೀಯಾನದ ಹೊದಿಕೆ ತೆಗೆಯುತ್ತಿರುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶವಾಗಿ ಮೃತಪಟ್ಟಿದ್ದಾನೆ.

ಮೃತನ ಪತ್ನಿ‌ ನೀಡಿದ ದೂರಿನನ್ವಯ ಪಿಎಸ್ ಐ ಸೌಮ್ಯ ಹಿರೇಮಠ ಅವರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next