Advertisement

ಚಲಿಸುತ್ತಿದ್ದ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್; ಸುಟ್ಟು ಕರಕಲಾದ ಕಾರು

12:52 PM Jul 03, 2020 | keerthan |

ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕಾರು ಸುಟ್ಟಯ ಕರಕಲಾದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಬಳಿ ನಡೆದಿದೆ.

Advertisement

ಮಂಗಳೂರಿನ ಶೋಧನ್ ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ಅವರು ಮಂಗಳೂರಿನಿಂದ ಶಿವಮೊಗ್ಗ ಬರುವಾಗ ಮಂಡಗದ್ದೆ ಬಳಿ ಈ ಘಟನೆ ನಡೆದಿದೆ.

ಕಾರಿನಲ್ಲಿ ಸುಟ್ಟವಾಸನೆ ಬರುತ್ತಿದ್ದಂತೆ ಶೋಧನ್ ಅವರು ಕಾರಿನಿಂದ ಇಳಿದರು. ನೋಡನೋಡುತ್ತಿದ್ದಂತೆ ಏಕಾಏಕಿ ಕಾರು ಹೊತ್ತಿ ಉರಿದಿದೆ. ಕಾರು ಚಲಾಯಿಸುತ್ತಿದ್ದ ಶೋಧನ್ ಅವರು ಕಾರಿನಿಂದ ಇಳಿದಿದ್ದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೂಡಲೇ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದರೂ ಅವರು ಬರುವಷ್ಟರಲ್ಲಿ ಕಾರು ಸುಟ್ಟು ಕರಕಲಾಗಿದೆ.

ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next