Advertisement

ಶಾರ್ಟ್‌ ಸರ್ಕ್ನೂಟ್‌ : ಅಪಾರ ಹಾನಿ

06:38 AM Jan 07, 2019 | Team Udayavani |

ಅಫಜಲಪುರ: ಶಾರ್ಟ್‌ ಸರ್ಕ್ನೂಟ್‌ ನಿಂದಾಗಿ ಮನೆಯೊಂದರಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ಆಭರಣ ಸುಟ್ಟುಹೋದ ಘಟನೆ ತಾಲೂಕಿನ ಬಡದಾಳದಲ್ಲಿ ನಡೆದಿದೆ.

Advertisement

ಲಕ್ಷ್ಮೀಪುತ್ರ ಗುಡೆದಮನಿ ಎನ್ನುವರು ಜ.6ರಂದು ಬೆಳಗ್ಗೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಅಫಜಲಪುರ ಪಟ್ಟಣಕ್ಕೆ ಹೋಗಿದ್ದರು. ಅವರ ಪತ್ನಿ ಮಹಾನಂದಾ ಹಾಗೂ ನಾಲ್ವರು ಮಕ್ಕಳು ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ ಮನೆಯಲ್ಲಿ ಹೊಗೆ ಕಾಣಿಸಿಕೊಂಡಾಗ ಪಕ್ಕದ ಮನೆಯ ಮಕ್ಕಳು ಕೂಗಿಕೊಂಡರು. 

ಈ ವೇಳೆ ಗ್ರಾಮದ ಯುವಕರು ಬೆಂಕಿ ನಂದಿಸಲು ಮುಂದಾಗಿದರು. ಅಗ್ನಿಶಾಮಕ ಠಾಣೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಮನೆಯಲ್ಲಿದ್ದ ಎರಡು
ಲಕ್ಷ ರೂ., ಬಂಗಾರೆದ ಆಭರಣ, ಧವಸ ಧಾನ್ಯ, ಪುಸ್ತಕಗಳು, ಬಟ್ಟೆ, ಪಾತ್ರೆಗಳು ಎಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next