Advertisement

ಬೆಂಗಳೂರು : ರಾತ್ರಿ 9 ಗಂಟೆಗೆ ಅಂಗಡಿ ಬಂದ್ ಮಾಡಿ 10ಕ್ಕೆ ಮನೆ ಸೇರಿಕೊಳ್ಳಬೇಕು : ಕಮಲ್ ಪಂಥ್

02:57 PM Apr 10, 2021 | Team Udayavani |

ಬೆಂಗಳೂರು : ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಯಾರೂ ರಾತ್ರಿ 10 ಗಂಟೆ ಮೇಲೆ ಬೆಂಗಳೂರಿನಲ್ಲಿ ಓಡಾಡುವ ಹಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಎಚ್ಚರಿಗೆ ನೀಡಿದ್ದಾರೆ.

Advertisement

ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇಂದಿನಿಂದ (ಏ. 10 ಶನಿವಾರ) ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದೇ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಪೊಲೀಸ್ ಇಲಾಖೆಯು ರಾತ್ರಿ 9 ಗಂಟೆಗೆ ಅಂಗಡಿಗಳನ್ನು ಮುಚ್ಚಿ 10 ಗಂಟೆ ಒಳಗಾಗಿ ಮನೆ ಸೇರಿಕೊಳ್ಳಬೇಕು ಎಂದಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಕಮಲ್ ಪಂಥ್, ಸರಿಯಾದ ಸಮಯಕ್ಕೆ ಅಂಗಡಿ, ಶಾಪ್ ಗಳನ್ನು ಮುಚ್ಚಿದರೆ ಸರಿಯಾದ ಸಮಯಕ್ಕೆ ಮನೆಗೆ ತೆರಳಲು ಸಾಧ್ಯವಾಗುತ್ತದೆ. ಸುತ್ತೋಲೆಯಲ್ಲಿ ಯಾರಿಗೆ ಅವಕಾಶ ನೀಡಲಾಗಿದೆಯೋ ಅವರು ಮಾತ್ರ ಓಡಾಡಲು ಅವಕಾಶ ಪಡೆದಿದ್ದಾರೆ. ಉಳಿದಂತೆ ಯಾರಿಗೂ ನೈಟ್ ಕರ್ಫ್ಯೂ ಪಾಸ್ ನೀಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next