Advertisement

ಸೈದಾಪುರ: ಪ್ರಿಯತಮೆಯನ್ನು ನೋಡಲು ಹೋದಾತ ಬರ್ಬರ ಹತ್ಯೆ

07:15 PM Sep 05, 2022 | Team Udayavani |

ಸೈದಾಪುರ: ಪ್ರಿಯತಮೆಯನ್ನು ನೋಡಲು ಹೋದ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಕಡೇಚೂರು ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

Advertisement

ಸಿದ್ಧಾರ್ಥ ಗೌಡ್(28) ಹತ್ಯೆಗೀಡಾದ ಯುವಕ.

ಕೂಲಿ ಕೆಲಸಕ್ಕಾಗಿ ದೂರದ ಬೆಂಗಳೂರಿಗೆ ವಲಸೆ ಹೋಗಿದ್ದ ಸಿದ್ಧಾರ್ಥ, ಕೆಲಸ ಮಾಡುವ ಸ್ಥಳದಲ್ಲಿ ಮದುವೆಯಾದ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿಸುತ್ತಿದ್ದ ಎನ್ನಲಾಗಿದೆ. ಆಕೆಯು ಅನ್ಯ ಕಾರಣಗಳಿಂದ ಕೆಲ ವರ್ಷಗಳ ಹಿಂದೆ ತನ್ನ ಪತಿಯಿಂದ ದೂರವಾಗಿದ್ದಳು. ಇಬ್ಬರು ಸ್ವಇಚ್ಛೆಯಿಂದ ಕೆಲ ಆಪ್ತರ ಮುಂದೆ ಮದುವೆ ಆಗಿದ್ದರು ಎಂದು ಹೇಳಲಾಗಿದೆ.

ಕೆಲ ದಿನಗಳ ಹಿಂದೆ ಪ್ರಿಯತಮೆ ತನ್ನ ತವರೂರಾದ ಕಡೇಚೂರಿಗೆ ಆಗಮಿಸಿದ್ದಾಳೆ. ಇದನ್ನರಿತ ಪ್ರಿಯಕರ ಅಕೆಯನ್ನು ಮಾತಾಡಿಸಿ ಬರುವೆನೆಂದು ತನ್ನ ಮನೆಯಲ್ಲಿ ಹೇಳಿ  ಕಡೇಚೂರಿಗೆ ಆಗಮಿಸಿದ್ದಾನೆ. ಈ ವಿಷಯವನ್ನು ಮಹಿಳೆಯ ಪತಿ ಹಾಗೂ ಸಹೋದರರು ತಿಳಿದು ಸಿದ್ದಾರ್ಥನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಯುವಕನ ತಂದೆ ಸೈದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next