Advertisement

ಬೆಂಗಳೂರು: ಚಾಕುವಿನಿಂದ ಇರಿದು ಸಹ ನಟನ ಬರ್ಬರ ಕೊಲೆ

03:48 PM Jun 18, 2022 | Team Udayavani |

ಬೆಂಗಳೂರು: ಚಾಕುವಿನಿಂದ ಇರಿದು ಸಹ ನಟನೊಬ್ಬನನ್ನು ಕೊಲೆಗೈದಿರುವ ಘಟನೆ ಆರ್‌ ಆರ್‌ ನಗರದ ಪಟ್ಟಣಗೆರೆಯಲ್ಲಿ ಶನಿವಾರ ( ಜೂ. 18) ರಂದು ನಡೆದಿದೆ.

Advertisement

ಸತೀಶ್‌ ವಜ್ರ (36) ಕೊಲೆಯಾದ ನಟ. ಕೌಟುಂಬಿಕ ವಿಚಾರಕ್ಕೆ ಸತೀಶ್‌ ಕೊಲೆಯಾಗಿದೆ ಎಂದು ಶಂಕಿಸಲಾಗಿದೆ.

ಮನೆಯಲ್ಲಿ ಚಾಕುವಿನಿಂದ ಇರಿದು ಭಾಮೈದನೇ  ಸತೀಶ್‌ ನನ್ನು  ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕೆಲ ತಿಂಗಳ ಹಿಂದೆ ಪತ್ನಿ ಸುಧಾ ಹೃದಯ ಸಂಬಂಧಿ ಕಾಯಿಲೆಯಿಂದ ಮೃತ ಪಟ್ಟಿದ್ದರು. ಆ ಬಳಿಕ ಸತೀಶ್‌ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಎನ್ನಲಾಗಿದೆ.

‘ಲಗೋರಿʼ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸತೀಶ್‌ ಸಹ ನಟನಾಗಿ ಕಾಣಿಸಿಕೊಂಡಿದ್ದರು. ಆರ್‌ ಆರ್‌ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next