Advertisement

ಬೊಮ್ಮಾಯಿ ಸಂಪುಟಕ್ಕೆ ಶಾಕ್: 15 ಸಚಿವರಿಗೆ ಸೋಲಿನ ರುಚಿ ತೋರಿಸಿದ ಮತದಾರ; ಸಂಪೂರ್ಣ ಪಟ್ಟಿ

03:27 PM May 13, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಹುತೇಕ ಕ್ಷೇತ್ರಗಳ ಫಲಿತಾಂಶ ಅಂತಿಮವಾಗಿದೆ. ಕಾಂಗ್ರೆಸ್ ಪಕ್ಷವು ಭರ್ಜರಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಬಿಜೆಪಿ ಮುಖಭಂಗ ಅನುಭವಿಸಿದೆ.

Advertisement

ಬಸವರಾಜ ಬೊಮ್ಮಾಯಿ ಸಂಪುಟದ 15 ಮಂದಿ ಸಚಿವರು ಸೋಲನುಭವಿಸಿದ್ದು, ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ. ಪ್ರಭಾವಿ ಸಚಿವರಾಗಿದ್ದ ಗೋವಿಂದ ಕಾರಜೋಳ, ಡಾ ಸುಧಾಕರ್, ಶ್ರೀರಾಮುಲು, ಸೋಮಣ್ಣ, ಮಾಧುಸ್ವಾಮಿ, ಮುರುಗೇಶ್ ನಿರಾಣಿ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಸೋಲನುಭವಿಸಿದ್ದಾರೆ.

ಬೊಮ್ಮಾಯಿ ಸಂಪುಟದ ಸಚಿವರ ಸೋಲು ಗೆಲುವಿನ ಲೆಕ್ಕ

ಬಸವರಾಜ ಬೊಮ್ಮಾಯಿ: ಗೆಲುವು (ಶಿಗ್ಗಾಂವಿ)

ಗೋವಿಂದ ಕಾರಜೋಳ: ಸೋಲು (ಮುಧೋಳ್)

Advertisement

ಡಾ ಅಶ್ವಥ ನಾರಾಯಣ: ಗೆಲುವು (ಮಲ್ಲೇಶ್ವರಂ)

ಆರ್.ಅಶೋಕ: ಪದ್ಮನಾಭ ನಗರ ಗೆಲುವು- ಕನಕಪುರ ಸೋಲು

ಬಿ.ಶ್ರೀರಾಮಲು: ಸೋಲು (ಬಳ್ಳಾರಿ ಗ್ರಾಮೀಣ)

ವಿ.ಸೋಮಣ್ಣ: ಸೋಲು (ವರುಣ ಮತ್ತು ಚಾಮರಾಜನಗರ)

ಜೆ.ಸಿ ಮಾಧುಸ್ವಾಮಿ: ಸೋಲು (ಚಿಕ್ಕನಾಯಕನ ಹಳ್ಳಿ)

ಸಿ.ಸಿ ಪಾಟೀಲ್: ಸೋಲು (ನರಗುಂದ)

ಪ್ರಭು ಚೌಹಾಣ್: ಗೆಲುವು (ಔರಾದ್)

ಶಶಿಕಲಾ ಜೊಲ್ಲೆ: ಗೆಲುವು (ನಿಪ್ಪಾಣಿ)

ಆನಂದ್ ಸಿಂಗ್ (ಪುತ್ರ ಸಿದ್ದಾರ್ಥ ಸಿಂಗ್ ಸ್ಪರ್ಧೆ): ಸೋಲು (ವಿಜಯನಗರ)

ಕೆ ಗೋಪಾಲಯ್ಯ: ಗೆಲುವು ಮಹಾಲಕ್ಷ್ಮೀ ಲೇಔಟ್

ಬೈರತಿ ಬಸವರಾಜು: ಗೆಲುವು ಕೆಆರ್ ಪುರಂ

ಎಸ್ ಟಿ ಸೋಮಶೇಖರ್: ಗೆಲುವು ಯಶವಂತಪುರ

ಬಿ.ಸಿ ಪಾಟೀಲ್: ಸೋಲು ( ಹಿರೇಕೆರೂರು)

ಡಾ.ಕೆ ಸುಧಾಕರ್: ಸೋಲು (ಚಿಕ್ಕಬಳ್ಳಾಪುರ)

ಕೆ.ಸಿ. ನಾರಾಯಣ ಗೌಡ: ಸೋಲು (ಕೆ.ಆರ್.ಪೇಟೆ)

ಅರೆಬೈಲು ಶಿವರಾಂ ಹೆಬ್ಬಾರ್: ಗೆಲುವು (ಯಲ್ಲಾಪುರ)

ಉಮೇಶ್ ಕತ್ತಿ (ಪುತ್ರ ನಿಖಿಲ್ ಕತ್ತಿ ಸ್ಪರ್ಧೆ): ಗೆಲುವು ಹುಕ್ಕೇರಿ

ಮುರುಗೇಶ್ ನಿರಾಣಿ: ಸೋಲು (ಬೀಳಗಿ)

ಎಂಟಿಬಿ ನಾಗರಾಜು: ಸೋಲು (ಹೊಸಕೋಟೆ)

ಎಸ್.ಅಂಗಾರ: ಟಿಕೆಟ್ ಇಲ್ಲ (ಸುಳ್ಯ)

ಆರಗ ಜ್ಞಾನೇಂದ್ರ: ಗೆಲುವು (ತೀರ್ಥಹಳ್ಳಿ)

ಬಿ.ಸಿ ನಾಗೇಶ್: ಸೋಲು (ತಿಪಟೂರು)

ಸುನಿಲ್ ಕುಮಾರ್: ಗೆಲುವು (ಕಾರ್ಕಳ)

ಶಂಕರ್ ಪಾಟೀಲ್ ಮುನೇನಕೊಪ್ಪ: ಸೋಲು (ನವಲಗುಂದ)

ಮುನಿರತ್ನ ನಾಯ್ಡು: ಗೆಲುವು (ಆರ್.ಆರ್.ನಗರ)

ವಿಶ್ವೇಶ್ವರ ಹೆಗಡೆ ಕಾಗೇರಿ (ಸ್ಪೀಕರ್): ಸೋಲು (ಶಿರಸಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next