Advertisement

ಸಂಸದೆ ಶೋಭಾ ಕಚೇರಿ ಉದ್ಘಾಟನೆ

10:06 AM Jun 11, 2019 | keerthan |

ಉಡುಪಿ: ಶೋಭಾ ಕರಂದ್ಲಾಜೆ ಅವರ ಸಂಸದರ ಕಚೇರಿ ಸೋಮವಾರ ಮಣಿಪಾಲದ ರಜತಾದ್ರಿಯಲ್ಲಿ ಆರಂಭಗೊಂಡಿತು.

Advertisement

ಕಚೇರಿಯನ್ನು ಹಿರಿಯರಾದ ಎಂ. ಸೋಮ ಶೇಖರ ಭಟ್‌ ಮತ್ತು ಕೇಶವರಾಯ ಪ್ರಭು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವಿಧಾನ ಪರಿಷತ್‌ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್‌, ವಿ.ಸುನಿಲ್‌ ಕುಮಾರ್‌, ಬಿ.ಎಂ. ಸುಕುಮಾರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಾಯಕರಾದ ಕುತ್ಯಾರು ನವೀನ್‌ ಶೆಟ್ಟಿ, ಯಶಪಾಲ್‌ ಸುವರ್ಣ, ಕುಯಿಲಾಡಿ ಸುರೇಶ ನಾಯಕ್‌, ಸಂಧ್ಯಾ ರಮೇಶ್‌, ಉದಯ ಕುಮಾರ ಶೆಟ್ಟಿ, ಪ್ರಭಾಕರ ಪೂಜಾರಿ, ನಯನಾ ಗಣೇಶ್‌ ಮೊದಲಾದವರು ಉಪಸ್ಥಿತರಿದ್ದರು.

ಸಂಸತ್‌ ಅಧಿವೇಶನ ಹೊರತುಪಡಿಸಿ ಪ್ರತಿ ಸೋಮವಾರ ಪೂರ್ವಾಹ್ನ ಮಣಿಪಾಲದ ಕಚೇರಿಯಲ್ಲಿದ್ದು ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದೇನೆ. ಅಪರಾಹ್ನ ಯಾವುದಾದರೂ ಒಂದು ಹೋಬಳಿಗೆ ಭೇಟಿ ನೀಡುತ್ತೇನೆ. ಮಂಗಳವಾರ ಪೂರ್ವಾಹ್ನ ಚಿಕ್ಕಮಗಳೂರು ಕಚೇರಿಯಲ್ಲಿದ್ದು ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದೇನೆ. ಅಪರಾಹ್ನ ಯಾವುದಾದರೂ ಒಂದು ಹೋಬಳಿಗೆ ಭೇಟಿ ನೀಡುತ್ತೇನೆ ಎಂದು ಶೋಭಾ ಹೇಳಿದರು.
ದೂರವಾಣಿ: 0820 2574950

Advertisement

Udayavani is now on Telegram. Click here to join our channel and stay updated with the latest news.

Next