Advertisement

ಸಿಎಎ ಪರ ಟ್ವೀಟ್‌ ಮಾಡಿದ್ದಕ್ಕೆ ಕೇರಳದಲ್ಲಿ ಪ್ರಕರಣ: ಕರಂದ್ಲಾಜೆ

10:14 PM Jan 25, 2020 | Sriram |

ಶೃಂಗೇರಿ: ಕೇರಳದ ಮಲ್ಲಪುರದಲ್ಲಿ ಸಿಎಎ ಕಾಯ್ದೆ ಪರವಾಗಿದ್ದ ಹಿಂದೂ ಕುಟುಂಬವೊಂದಕ್ಕೆ ನೀರು ನೀಡಲಾಗುತ್ತಿಲ್ಲ ಎಂದು ಟ್ವೀಟ್‌ ಮಾಡಿದ್ದಕ್ಕೆ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಅಲ್ಪಸಂಖ್ಯಾಕರಾಗಿರುವ ಹಿಂದೂಗಳಿಗೆ ಅನ್ಯಾಯವಾದರೆ ಸಹಿಸಲಾಗದು. ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬ ಸಿಎಎ ಪರವಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದಕ್ಕೆ ಈತನಿಗೆ ಗ್ರಾಮದಲ್ಲಿ ಟೀ ಮಾರಾಟ ಮಾಡದಂತೆ ಬಹಿಷ್ಕರಿಸಲಾಗಿದೆ. ಈ ವ್ಯಕ್ತಿಯ ಪರವಾಗಿ ಮತ್ತೆ ಟ್ವೀಟ್‌ ಮಾಡಿದ್ದೇನೆ. ಹೀಗೆ ಸಿಎಎ ಪರ ಟ್ವೀಟ್‌ ಮಾಡಿದ್ದಕ್ಕಾಗಿ ಕೇರಳ ಪೊಲೀಸ್‌ ಇಲಾಖೆ ಕೇಸು ದಾಖಲಿಸಿದೆ. ಆದರೆ ಇದಕ್ಕೆಲ್ಲ ಬೆದರದೆ ಇನ್ನು ಮುಂದೆಯೂ ಜನಪರವಾದ ನಿಲುವುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next