Advertisement

ಸಚಿವೆ ಶೋಭಾ ಇಟಲಿ ಪ್ರವಾಸ : ಕೃಷಿ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ

12:14 AM Dec 07, 2022 | Team Udayavani |

ಉಡುಪಿ : ಇಟಲಿ ಪ್ರವಾಸದಲ್ಲಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ರೋಮ್‌ ನಗರ ದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ – 2023ರ ಉದ್ಘಾಟನೆಯಲ್ಲಿ ಭಾಗವಹಿಸಿದರು.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಪ್ರಸ್ತಾವನೆಯಂತೆ, ವಿಶ್ವ ಸಂಸ್ಥೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿತ್ತು.

ಇಟಲಿಯ ಕೃಷಿ ಸಚಿವ ಫ್ರಾನ್ಸಿಸ್ಕೋ ಲೊಲ್ಲೋಬ್ರಿಗಿದಾ ಅವರನ್ನು ಸೋಮವಾರ ರೋಮ್‌ನಲ್ಲಿ ಭೇಟಿಯಾಗಿ ಉಭಯ ದೇಶಗಳ ನಡುವೆ ಕೃಷಿ ರಫ್ತು , ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ತಂತ್ರಜ್ಞಾನಗಳ ವರ್ಗಾವಣೆ ಇತ್ಯಾದಿ ವಿಚಾರಗಳ ಕುರಿತು ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next