Advertisement

ಹೊಸ ಸಿನಿಮಾಕ್ಕೆ ಶಿವಣ್ಣ ಗ್ರೀನ್‌ ಸಿಗ್ನಲ್‌

11:07 AM Jan 25, 2022 | Team Udayavani |

“ಬೈರಾಗಿ’ ಚಿತ್ರೀಕರಣ ಮುಗಿಸಿ “ವೇದ’ ಸಿನಿಮಾದಲ್ಲಿ ಬಿಝಿಯಾಗಿರುವ ಶಿವರಾಜ್‌ಕುಮಾರ್‌ ಈಗ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.

Advertisement

ಆರ್‌.ಜಯ್‌ ಈ ಸಿನಿಮಾದ ನಿರ್ದೇಶಕರು. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಉಪೇಂದ್ರ ನಟನೆಯ “ಬುದ್ಧಿವಂತ-2′ ಚಿತ್ರ ನಿರ್ದೇಶಿಸಿರುವ ಜಯರಾಮ್‌ ಈಗ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು, ಆರ್‌.ಜಯ್‌ ಎಂದು ಮಾಡಿಕೊಂಡಿದ್ದಾರೆ.

ಈಗಾಗಲೇ ಶಿವರಾಜ್‌ಕುಮಾರ್‌ ಅವರ ಅನೇಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿರುವ ಜಯ್‌, ಈಗ ಶಿವರಾಜ್‌ಕುಮಾರ್‌ ಅವರಿಗೆ ಸಿನಿಮಾ ನಿರ್ದೇಶನ ಮಾಡುತ್ತಿರುವ ಖುಷಿಯಲ್ಲಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ, “ಇದೊಂದು ಅದ್ಧೂರಿ ಬಜೆಟ್‌ನ ಸಿನಿಮಾವಾಗಿದ್ದು, ರೆಟ್ರೋ ಶೈಲಿಯಲ್ಲಿ ಮೂಡಿಬರಲಿದೆ. ನಿರ್ಮಾಪಕರು ಸಿನಿಮಾವನ್ನು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಾಡಲು ನಿರ್ಧರಿಸಿದ್ದಾರೆ’ ಎನ್ನುತ್ತಾರೆ ಜಯ್‌. ಇನ್ನು, ಈ ಚಿತ್ರವನ್ನು ಆರ್‌.ಕೇಶವ್‌ ನಿರ್ಮಿಸುತ್ತಿದ್ದಾರೆ.

ಈಗಾಗಲೇ “ಲಕ ಲಕ ಲ್ಯಾಂಬೋರ್ಗಿನಿ’ ವಿಡಿಯೋ ಆಲ್ಬಂ ನಿರ್ಮಿಸಿದ್ದ ಕೇಶವ್‌ ಈಗ ಶಿವರಾಜ್‌ಕುಮಾರ್‌ ಅವರಿಗೆ ಅದ್ಧೂರಿ ಬಜೆಟ್‌ನ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಚಿತ್ರದ ಇತರ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next