Advertisement

ಶಿವಮೊಗ್ಗ: ಅಪರಿಚಿತ ವಾಹನ ಹರಿದು ವೃದ್ಧೆಯ ದೇಹ ಛಿದ್ರ ಛಿದ್ರ

11:49 AM Jan 22, 2022 | Vishnudas Patil |

ಶಿವಮೊಗ್ಗ: ಜಿಲ್ಲೆಯ ತ್ಯಾವರೆಚಟ್ನಹಳ್ಳಿಯಲ್ಲಿ ಶನಿವಾರ ನಡೆದ ಭೀಕರ ಅಪಘಾತದಲ್ಲಿ ವೃದ್ಧೆಯ ದೇಹ ಛಿದ್ರ ಛಿದ್ರವಾಗಿದೆ.

Advertisement

ಹೊಳೆಹನಸವಾಡಿಯ ಕೆಂಚಮ್ಮ( 70) ಮೃತ ದುರ್ದೈವಿಯಾಗಿದ್ದು,ತ್ಯಾವರೆಚಟ್ನಹಳ್ಳಿಯ ಪೆಟ್ರೋಲ್ ಬಂಕ್ ಬಳಿ ಶರವೇಗದಲ್ಲಿ ಬಂದ ಅಪರಿಚಿತ ವಾಹನವೊಂದು ಹರಿದು ಸ್ಥಳದಿಂದ ಪರಾರಿಯಾಗಿದೆ. ಢಿಕ್ಕಿಯ ರಭಸಕ್ಕೆ ವೃದ್ಧೆಯ ದೇಹ ಸಂಪೂರ್ಣ ಛಿದ್ರವಾಗಿದ್ದು, ಸ್ಥಳದಲ್ಲಿದ್ದವರನ್ನು ಬೆಚ್ಚಿ ಬೀಳಿಸಿದೆ.

ಶಿವಮೊಗ್ಗ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವಾಹನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next