Advertisement

Shivamogga:ಟ್ರಯಲ್ ಬ್ಲಾಸ್ಟ್ ಪ್ರಕರಣ: ತೀರ್ಥಹಳ್ಳಿ ಮೂಲದ ನಾಲ್ವರಿಗೆ ನೋಟಿಸ್ ನೀಡಿದ ಎನ್ಐಎ

12:24 PM Oct 17, 2023 | Kavyashree |

ತೀರ್ಥಹಳ್ಳಿ: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಹಾಗೂ ದೇಶದ ತ್ರಿವರ್ಣ ಧ್ವಜ ಸುಟ್ಟ ಪ್ರಕರಣ ಸಂಬಂಧ ಪ್ರಕರಣಗಳ ತನಿಖೆ ಚುರುಕುಗೊಳಿಸಿರುವ ಎನ್ಐಎ ತಂಡ ಇದೀಗ ತನಿಖೆ ಸಲುವಾಗಿ ಬೆಂಗಳೂರು ಕಚೇರಿಗೆ ಬರುವಂತೆ ನಾಲ್ಕು ಜನರಿಗೆ ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ದೆಹಲಿ ವಿಮಾನ ನಿಲ್ದಾಣದಲ್ಲಿ ತೀರ್ಥಹಳ್ಳಿಯ ಶಂಕಿತ ಉಗ್ರ ಅರಫತ್ ಅಲಿ ಬಂಧನದ ಬೆನ್ನಲ್ಲೇ ತನಿಖೆ ಮತ್ತಷ್ಟು ಚುರುಕುಗೊಳಿಸಿರುವ ಎನ್ಐಎ ತಂಡ ತೀರ್ಥಹಳ್ಳಿ ಮೂಲದ ನಾಲ್ವರಿಗೆ ನೋಟಿಸ್ ನೀಡಿದ್ದಾರೆ.

ಅಕ್ಟೋಬರ್ 19 ರ ಮಧ್ಯಾಹ್ನ 1 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದು, ಅರಫತ್ ಅಲಿ ಜೊತೆಗೆ ನಿಕಟ ಸಂಬಂಧ ಹೊಂದಿದವರ ಮೇಲೆ ನಿಗಾ ಇಡಲಾಗಿದೆ.

ಎಲ್ಲಾ ಆಯಾಮಗಳಲ್ಲೂ ಎನ್ಐಎ ತಂಡ ತನಿಖೆ ನಡೆಸುತ್ತಿದ್ದು ಅರಫತ್ ಅಲಿ ಮೊಬೈಲ್ ನ ಡೇಟಾ ಆಧರಿಸಿ ತೀರ್ಥಳ್ಳಿಗೆ ಬಂದು, ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ ನಲ್ಲಿ ಎನ್ಐಎ ಇನ್ನಷ್ಟು ಜನರನ್ನ ಬಂಧಿಸುವ ಸಾಧ್ಯತೆ ಇರಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next