Advertisement

ಶಿವಮೊಗ್ಗ: ತ್ಯಾವರೆಕೊಪ್ಪದ ಆಕರ್ಷಣೆಯಾಗಿದ್ದ “ರಾಮ”ಇನ್ನಿಲ್ಲ

05:53 PM May 12, 2022 | Team Udayavani |

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ರಾಮ ಎಂಬ 17 ವರ್ಷದ ಗಂಡು ಹುಲಿ ವಯೋಸಹಜ ಕಾರಣದಿಂದ ಮೃತಪಟ್ಟಿದೆ ಎಂದು ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Advertisement

ಈ ಕುರಿತು ಕಾನೂನು ರೀತಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ದಹನ ಕ್ರಿಯೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಐದು ಹುಲಿಗಳಿದ್ದು ಸೀತಾಗೆ 16 ವರ್ಷ, ವಿಜಯ ಹಾಗೂ ದಶಮಿಗೆ 15 ವರ್ಷ, ಹನುಮನಿಗೆ 20 ವರ್ಷ, ಪೂರ್ಣಿಮಾಗೆ 11 ವರ್ಷ ವಯಸ್ಸಾಗಿದೆ. ಪೂರ್ಣಿಮಾ ಈಗ ತಾನೆ ಮೃಗಾಲಯಕ್ಕೆ ಬಂದಿದ್ದು ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ. ಸಂತಾನೋತ್ಪತ್ತಿ ದೃಷ್ಟಿಯಿಂದ ಯೌವನಾವಸ್ಥೆಯ ಹುಲಿಗಳಿಗೆ ಮೃಗಾಲಯ ಬೇಡಿಕೆ ಸಲ್ಲಿಸಿದೆ.

ಇದನ್ನೂ ಓದಿ : ಹೆಬ್ರಿ:  ಬೇಳಂಜೆಯಲ್ಲಿ ಗಾಳಿ ಮಳೆ, ರಸ್ತೆಗೆ ಉರುಳಿದ ಅಪಾಯಕಾರಿ ಮರಗಳು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next