Advertisement

ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮ

05:10 PM Jan 09, 2022 | Adarsha |

ಶಿವಮೊಗ್ಗ: ಸರಕಾರದ ಮಾರ್ಗಸೂಚಿ ಪ್ರಕಾರಕೋವಿಡ್‌ ನಿಯಂತ್ರಣಕ್ಕೆ ಎಲ್ಲಾ ಮುಂಜಾಗರೂಕತಾಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನ ಗೊಂದಲಕ್ಕೆಒಳಗಾಗುವ ಅಗತ್ಯ ಇಲ್ಲ ಎಂದು ಜಿಲ್ಲಾ ಉಸ್ತುವಾರಿಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಕೋವಿಡ್‌ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತುಶನಿವಾರ ನಡೆದ ಅಧಿ ಕಾರಿಗಳ ಸಭೆಯಲ್ಲಿ ಅವರುಮಾತನಾಡಿದರು.

Advertisement

ಕೋವಿಡ್‌ ಎದುರಿಸಲು ಜಿಲ್ಲಾಡಳಿತ ಎಲ್ಲಾಸಿದ್ಧತೆಗಳನ್ನು ಕೈಗೊಂಡಿದೆ. ಆರೋಗ್ಯ ವ್ಯವಸ್ಥೆಸುಧಾರಿಸಲಾಗಿದ್ದು, ಎಲ್ಲಾ ತಾಲೂಕುಗಳಲ್ಲಿಸೂಕ್ತ ಬೆಡ್‌ ವ್ಯವಸ್ಥೆ, ಆಕ್ಸಿಜನ್‌ ಲಭ್ಯತೆಯನ್ನುಖಾತ್ರಿಪಡಿಸಲು ಸೂಚಿಸಲಾಗಿದೆ. ಮುಂಜಾಗ್ರತಾಕ್ರಮವಾಗಿ ಜನ ಗುಂಪು ಸೇರುವುದನ್ನು ತಪ್ಪಿಸಲುವಾರಾಂತ್ಯ ಕರ್ಫ್ಯೂ ವಿ ಧಿಸಲಾಗಿದ್ದು ಜನಭಯಪಡುವ ಅಗತ್ಯ ಇಲ್ಲ ಎಂದರು.ಟಾಸ್ಕ್ ಫೋರ್ಸ್‌: ಗ್ರಾಮೀಣ ಮಟ್ಟದಲ್ಲಿಈಗಾಗಲೇ ರಚಿಸಲಾಗಿರುವ ಟಾಸ್ಕ್ಫೋರ್ಸ್‌ ಮತ್ತೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು.

ಗ್ರಾಮಪಂಚಾಯತ್‌ ಅಧ್ಯಕ್ಷರನೇತೃತ್ವದಲ್ಲಿ ಟಾಸ್ಕ್ಫೋರ್ಸ್‌ ರಚಿಸಲಾಗಿದ್ದು,ಅದರಲ್ಲಿರುವ ಅ ಧಿಕಾರಿಗಳು ಸಕ್ರಿಯವಾಗಿಸಭೆಗಳಲ್ಲಿ ಬಾಗವಹಿಸುವುದು ಸೇರಿದಂತೆ ಕರ್ತವ್ಯನಿರ್ವಹಿಸಬೇಕು. ಈ ಕುರಿತು ಯಾವುದೇದೂರುಗಳು ಬರಬಾರದು ಎಂದರು.ಲಸಿಕೆ ಅಭಿಯಾನ: 60 ವರ್ಷ ಮೇಲ್ಪಟ್ಟವರಿಗೆಬೂಸ್ಟರ್‌ ಡೋಸ್‌ ನೀಡುವ ಪ್ರಕ್ರಿಯೆಗೆಜನವರಿ 10ರಿಂದ ಜಿಲ್ಲೆಯಾದ್ಯಂತ ಚಾಲನೆನೀಡಲಾಗುವುದು.

ಈಗಾಗಲೇ ಎರಡನೇ ಡೋಸ್‌ಪಡೆದು 90 ದಿನ ಕಳೆದಿರುವವರು ಬೂಸ್ಟರ್‌ಡೋಸ್‌ ಪಡೆಯಬಹುದಾಗಿದೆ. ಬೂಸ್ಟರ್‌ಡೋಸ್‌ ಪಡೆಯಲು ಜಿಲ್ಲೆಯಲ್ಲಿ ಒಟ್ಟು 2ಲಕ್ಷಫಲಾನುಭವಿಗಳಿದ್ದರೆ. ಎಲ್ಲಾ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ಬೂಸ್ಟರ್‌ ಡೋಸ್‌ ನೀಡಲು ವ್ಯವಸ್ಥೆಮಾಡಲಾಗುವುದು. ಇದೇ ರೀತಿ ಈಗಾಗಲೇ15-18 ವರ್ಷದೊಳಗಿನವರಿಗೆ ಲಸಿಕೆ ನೀಡುವಕಾರ್ಯ ನಡೆಯುತ್ತಿದ್ದು, ಡಿಸೆಂಬರ್‌ 12 ರಒಳಗಾಗಿ ಎಲ್ಲಾ 83,831 ಮಂದಿಗೆ ಲಸಿಕೆ ನೀಡುವಕಾರ್ಯ ಪೂರ್ಣಗೊಳಿಸಬೇಕು ಎಂದರು.ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌ ಮಾತನಾಡಿ,ಕೋವಿಡ್‌ ಮೂರನೇ ಅಲೆ ಎದುರಿಸಲು ಎಲ್ಲಾಸಿದ್ಧತೆ ಮಾಡಲಾಗಿದೆ.

ಮೆಗ್ಗಾನ್‌ ಆಸ್ಪತ್ರೆಯಲ್ಲಿ1382 ಬೆಡ್‌ ಗಳು ಲಭ್ಯವಿದ್ದು, 640 ಬೆಡ್‌ ಗಳನ್ನೂಕೋವಿಡ್‌ಗಾಗಿ ಮೀಸಲಿರಿಸಲಾಗಿದೆ. ಜಿಲ್ಲೆಯಲ್ಲಿಒಟ್ಟು 94 ಸಾವಿರ ಕಿಲೋ ಲೀಟರ್‌ ಆಕ್ಸಿಜನ್‌ಸಂಗ್ರಹಣಾ ಸಾಮರ್ಥ್ಯದ ವ್ಯವಸ್ಥೆ ಮಾಡಲಾಗಿದೆ.ಕೋವಿಡ್‌ ಸಮರ್ಪಕ ನಿರ್ವಹಣೆಗೆ ವಾರ್‌ರೂಮ್‌ ಆರಂಭಿಸಲಾಗಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿವೈದ್ಯಾ ಧಿಕಾರಿಗಳು ಸೇರಿದಂತೆ ಅಗತ್ಯಮೂಲಸೌಕರ್ಯಗಳನ್ನು ಸಜ್ಜುಗೊಳಿಸಲಾಗಿದೆ.ನರ್ಸ್‌ಗಳ ಕೊರತೆ ನೀಗಿಸಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಶೇ. 97.67 ಜನಪ್ರಥಮ ಡೋಸ್‌ ಪಡೆದಿದ್ದು, ಶೇ. 80 ರಷ್ಟು ಜನಎರಡನೇ ಡೋಸ್‌ ಪಡೆದಿದ್ದಾರೆ ಎಂದರು.ಶಾಸಕರಾದ ಅಶೋಕ್‌ ನಾಯ್ಕ, ರುದ್ರೇಗೌಡ,ಡಿ. ಎಸ್‌. ಅರುಣ್‌, ಜಿಲ್ಲಾಪಂಚಾಯತ್‌ಮುಖ್ಯ ಕಾರ್ಯನಿರ್ವಹಣಾಧಿಕಾರಿಎಂ.ಎಲ್‌. ವೈಶಾಲಿ, ಎಸ್‌.ಪಿ. ಲಕೀÒ$¾ ಪ್ರಸಾದ್‌ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next