Advertisement

ಮಂಜುನಾಥ್‌ಗೆ 4ನೇ ಬಾರಿ ಒಲಿದ ಅಧ್ಯಕ್ಷ ಗಾದಿ

04:37 PM Nov 22, 2021 | Adarsha |

ಶಿವಮೊಗ್ಗ: ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾಕಸಾಪ ಚುನಾವಣೆಯಲ್ಲಿ ಡಿ.ಮಂಜುನಾಥ್‌ನಾಲ್ಕನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಪತ್ರಕರ್ತರಾದ ಶಿಜುಪಾಶ, ಗಾ.ರಾ.ಶ್ರೀನಿವಾಸ್‌, ಮಾಜಿ ಅಧ್ಯಕ್ಷ ಡಿ. ಮಂಜುನಾಥ್‌ಹಾಗೂ ನಿಕಟಪೂರ್ವ ಅಧ್ಯಕ್ಷ ಡಿ.ಬಿ. ಶಂಕರಪ್ಪಸೇರಿ ನಾಲ್ವರು ಕಣದಲ್ಲಿದ್ದರು.

Advertisement

ನಿಕಟಪೂರ್ವಮತ್ತು ಮಾಜಿ ಅಧ್ಯಕ್ಷರ ನಡುವೆ ವಾಕ್ಸಮರಜೋರಾಗಿತ್ತು. ಈ ನಡುವೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆಮಾಜಿ ಅಧ್ಯಕ್ಷರು ಸ್ಪರ್ಧೆ ಮಾಡುವಂತಿಲ್ಲ ಎಂಬ ನಿಯಮಾವಳಿ ಇದ್ದು ಮಾಜಿಗಳುಸ್ಪರ್ಧೆಯಿಂದ ಅನರ್ಹರಾಗುತ್ತಾರೆ ಎಂದೇಪ್ರಚಾರ ನಡೆಸಲಾಗಿತ್ತು. ಕೋರ್ಟ್‌ ತೀರ್ಪಿನನಂತರ ವಿವಾದ ತಣ್ಣಗಾಗಿ ಅಂತಿಮವಾಗಿಡಿ. ಮಂಜುನಾಥ್‌ ಗೆಲುವಿನ ನಗೆ ಬೀರಿದ್ದಾರೆ.

ಸಾಹಿತ್ಯ ಗ್ರಾಮ ನಿರ್ಮಾಣದ ವಿಚಾರದಲ್ಲಿಡಿ. ಮಂಜುನಾಥ್‌ ಹಾಗೂ ಡಿ.ಬಿ.ಶಂಕರಪ್ಪನಡುವೆ 5 ವರ್ಷದಿಂದಲೂ ಟೀಕೆ- ಟಿಪ್ಪಣಿಗಳುಕೇಳಿಬಂದಿದ್ದವು. ಹಣ ದುರುಪಯೋಗ,ಅಡಿಗಲ್ಲು ಮಾಯ, ತಾಲೂಕು ಭವನಗಳಅಪೂರ್ಣ ಕಾಮಗಾರಿ ಸೇರಿದಂತೆ ಅನೇಕವಿಷಯಗಳು ಚುನಾವಣೆಯಲ್ಲಿ ತೇಲಿಬಂದಿದ್ದವು. ಡಿ.ಬಿ. ಶಂಕರಪ್ಪ ಅವರಿಗೆಸಂಘ ಪರಿವಾರದ ಬೆಂಬಲ ಕೂಡ ಸಿಕ್ಕಿತ್ತು.ಆದರೂ ನಿರೀಕ್ಷಿತ ಫಲಿತಾಂಶ ಪಡೆಯಲುವಿಫಲರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next