Advertisement

ಹಿಂದುತÌವಾದಿಗಳ ಹತ್ಯೆ ಹೇಯ ಕೃತ್ಯ

07:30 PM Jul 28, 2022 | Adarsha |

ಶಿವಮೊಗ್ಗ: ಯಾವುದೇ ತಪ್ಪಿಲ್ಲದಹಿಂದುತ್ವವಾದಿಗಳನ್ನು ಕೆಲವು ಮತಾಂಧಶಕ್ತಿಗಳಿಂದ ಕಗ್ಗೊಲೆ ಮಾಡುವುದು,ಹಲ್ಲೆ ನಡೆಸುವುದು ನಡೆಯುತ್ತಿದೆ.ಇದು ಅತ್ಯಂತ ಹೇಯಕೃತ್ಯವಾಗಿದ್ದು, ಮಂಗಳೂರಿನಲ್ಲಿಬಿಜೆಪಿ ಕಾರ್ಯಕರ್ತ ಪ್ರವೀಣ್‌ಹತ್ಯೆ ಖಂಡನೀಯ ಎಂದುಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದಅವರು, ಮಂಗಳೂರಿನಲ್ಲಿ ನಡೆದ ಬಿಜೆಪಿಕಾರ್ಯಕರ್ತನ ಕೊಲೆಯನ್ನು ಎಲ್ಲಾ ರಾಜಕೀಯಪಕ್ಷಗಳು ಖಂಡಿಸಬೇಕು.

Advertisement

ಇಂತಹ ಕೃತ್ಯಎಸಗುವವರಿಗೆ ಯಾರೂ ಬೆಂಬಲಕೊಡಬಾರದು. ಸರ್ಕಾರ ಬಲಹೀನ ಅಥವಾದುರ್ಬಲವಾಗಿಲ್ಲ. ಕೊಲೆಗಡುಕರನ್ನು ಬಂಧಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.ರಾಜ್ಯದಲ್ಲಿ ಶಾಂತಿ ಕಾಪಾಡುವ ಒಂದೇಉದ್ದೇಶದಿಂದ ಹಿಂದೂಗಳು ಸಂಯಮದಿಂದಎಲ್ಲವನ್ನು ಸಹಿಸಿಕೊಂಡಿದ್ದಾರೆ. ಆದರೆಎಷ್ಟು ದಿನ ಶಾಂತಿಯಿಂದ ಇರಲು ಸಾಧ್ಯ.ದಯವಿಟ್ಟು ಇಂತಹ ಕೃತ್ಯ ನಿಲ್ಲಬೇಕು. ಈ ಬಗ್ಗೆಸಿಎಂ ಜತೆ ಮಾತನಾಡುವೆ. ಕೊಲೆಗಡುಕರಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದುಮನವಿ ಮಾಡುತ್ತೇನೆ. ಹಿಂದೂಗಳು ಶಾಂತಿಪ್ರಿಯರು. ಆದರೆ ಯಾರೂ ಅದನ್ನು ಪರೀಕ್ಷೆಮಾಡಲು ಮುಂದಾಗಬಾರದು.

ಕೊಲೆಗೆಕೊಲೆಯೇ ಉತ್ತರ ಎಂಬುದು ನಮ್ಮಉದ್ದೇಶ ಅಲ್ಲ. ಆ ರೀತಿಯಾದರೆ ರಾಜ್ಯದಲ್ಲಿರಕ್ತಪಾತವೇ ಆಗುತ್ತದೆ. ಆದರೆ ಇಂತಹಮನಸ್ಥಿತಿ ಬದಲಾವಣೆ ಮಾಡಿಕೊಳ್ಳದಿದ್ದರೆಕ್ರಮ ಕೈಗೊಳ್ಳುವುದು, ತಕ್ಕ ಉತ್ತರ ಕೊಡುವುದುಅನಿವಾರ್ಯವಾಗಲಿದೆ. ಕಾಂಗ್ರೆಸ್‌ಸರ್ಕಾರದ ಅವ ಧಿಯಲ್ಲಿ ಹಿಂದೂಗಳಕೊಲೆಯಾದಾಗ ಹಿಂದೂಗಳನ್ನೇಜೈಲಿಗೆ ಕಳುಹಿಸುತ್ತಿದ್ದರು.ಹಿಂದೂಗಳನ್ನು ಹತ್ತಿಕ್ಕುವ ಕೆಲಸನಡೆಯುತ್ತಿತ್ತು. ಆದರೆ ಬಿಜೆಪಿಸರ್ಕಾರ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next