Advertisement

ವಿಜೃಂಭಣೆಯ ಆಡಿಕೃತಿಕೆ ಹರೋಹರ ಜಾತ್ರೆ

08:35 PM Jul 24, 2022 | Adarsha |

ಶಿವಮೊಗ್ಗ: ಇಲ್ಲಿನ ಗುಡೇಕಲ್‌ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿಯ ಎರಡು ದಿನಗಳ ಆಡಿಕೃತ್ತಿಕೆ ಹರೋಹರಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ಕೊರೊನಾ ಸಾಂಕ್ರಾಮಿಕದಿಂದ ಕಳೆದೆರಡುವರ್ಷದಿಂದ ಸ್ಥಗಿತಗೊಂಡಿದ್ದ ಜಾತ್ರೆ ಈ ಬಾರಿಅದ್ಧೂರಿಯಾಗಿ ನಡೆಯಿತು.

Advertisement

ಜಿಲ್ಲೆ ಹಾಗೂ ರಾಜ್ಯದವಿವಿಧೆಡೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದಭಕ್ತರು ದೇವರ ಕೃಪೆಗೆ ಪಾತ್ರರಾದರು.ಬಾಲಸುಬ್ರಹ್ಮಣ್ಯ ಸ್ವಾಮಿ ಸನ್ನಿ ಧಿಯಲ್ಲಿ ಹರಕೆಯಕಾವಡಿಗಳನ್ನು ಹೊತ್ತ ಭಕ್ತರು ಭಕ್ತಿ ಪರಾಕಾಷ್ಠೆಮೆರೆದರು. ಬಾಲಸುಬ್ರಹ್ಮಣ್ಯ ದೇವಾಲಯದಲ್ಲಿಮುಂಜಾನೆಯಿಂದಲೇ ವಿಶೇಷ ಪೂಜೆ ಪುನಸ್ಕಾರಆರಂಭಗೊಂಡವು.

ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿದರ್ಶನ ಪಡೆದು ಭಕ್ತರು ಪುನೀತರಾದರು.ಕಾವಡಿಗಳನ್ನು ಹೊತ್ತು ಹರಕೆ ತೀರಿಸುವ ಭಕ್ತರುತುಂಗಾನದಿಯಲ್ಲಿ ಮಿಂದು ಮಡಿಯುಟ್ಟು ಪೂಜೆಗೆಅಣಿಯಾದರು. ಹಳದಿ ವಸ್ತ್ರಗಳನ್ನು ತೊಟ್ಟ ಭಕ್ತರಗುಂಪು ಭುಜದ ಮೇಲೆ ಕಾವಡಿಯನ್ನು ಹೊತ್ತುವಾದ್ಯದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next