Advertisement

ಕೋಮು ದ್ವೇಷ ಕೃತ್ಯಕ್ಕೆ ಭುಗಿಲೆದ್ದ ಆಕ್ರೋಶ

04:24 PM Jul 01, 2022 | Adarsha |

ಶಿವಮೊಗ್ಗ: ರಾಜಸ್ಥಾನದ ಉದಯಪುರದಲ್ಲಿ ಹಾಡಹಗಲೇ ನಡೆದಅಮಾಯಕ ಹಿಂದೂ ಟೈಲರ್‌ ಕನ್ಹಯ್ಯಲಾಲ್‌ ಹತ್ಯೆ ಖಂಡಿಸಿವಿಶ್ವ ಹಿಂದೂ ಪರಿಷತ್‌- ಭಜರಂಗ ದಳ ಕಾರ್ಯಕರ್ತರುಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿನಂತರ ಜಿಲ್ಲಾ ಧಿಕಾರಿಗಳ ಕಚೇರಿಗೆ ತಲುಪಿ ಜಿಲ್ಲಾ ಧಿಕಾರಿಗಳಮುಖಾಂತರ ರಾಷ್ಟÅಪತಿಗಳಿಗೆ ಮನವಿ ಸಲ್ಲಿಸಿದರು.

Advertisement

ಕನ್ಹಯ್ಯಲಾಲ್‌ ಅವರನ್ನು ಮುಸ್ಲಿಂ ಭಯೋತ್ಪದಕರಾದಮಹಮದ್‌ ರಿಯಾಜ್‌ ಮತ್ತು ಮಹಮದ್‌ ಗೌಸ್‌ ಜಿಹಾದಿಮಾನಸಿಕತೆ ಹೊಂದಿ ದ್ವೇಷ ಭಾವನೆಯಿಂದ ಕೋಮು ಭಾವನಕೆರಳಿಸುವ ದುರುದ್ದೇಶ ಹಾಗೂ ಹಿಂದೂ ಸಮಾಜವನ್ನುಭಯಭೀತಿಗೊಳಿಸುವ ದೃಷ್ಟಿಯಿಂದ ಮಾಡಿದ್ದು ಇಬ್ಬರೂಕೊಲೆಗಾರರನ್ನು ಶೀಘ್ರ ಶಿಕ್ಷೆಗೆ ಗುರಿಪಡಿಸಲು ಆದೇಶಿಸಬೇಕುಎಂದು ಆಗ್ರಹಿಸಿದರು.

ಪ್ರತಿಭನೆಯಲ್ಲಿ ವಿಎಚ್‌ಪಿ ಜಿಲ್ಲಾಧ್ಯಕ್ಷಜೆ.ಆರ್‌. ವಾಸುದೇವ್‌, ಕಾರ್ಯದರ್ಶಿ ನಾರಾಯಣ್‌ ಜೀವರ್ಣೇಕರ್‌, ನಗರಾಧ್ಯಕ್ಷ ಸತೀಶ್‌ ಮುಂಚೆಮನೆ, ನಗರಕಾರ್ಯದರ್ಶಿ ಸುಧಾಕರ ಎಸ್‌.ಆರ್‌., ಭಜರಂಗ ದಳ ಜಿಲ್ಲಾಸಂಚಾಲಕ ರಾಜೇಶ್‌ ಗೌಡ, ನಗರ ಸಂಚಾಲಕ ಅಂಕುಶ್‌, ವಿ.ಗುರುರಾಜ್‌, ಎಚ್‌.ಸಿ. ಪವನ್‌ಕುಮಾರ್‌, ವಿ. ರಾಜೇಶ್‌, ಪಿ.ಉಲ್ಲಾಸ್‌, ಕಾಂತರಾಜ್‌, ವಿಜಯ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next