Advertisement

­­­ ಶಿಮುಲ್‌ನಿಂದ “ಯೋಗ ಅರಿವು’

05:46 PM Jun 18, 2022 | Adarsha |

ಶಿವಮೊಗ್ಗ: ಶಿಮುಲ್‌ (ಶಿವಮೊಗ್ಗ,ದಾವಣಗೆರೆ ಮತ್ತು ಚಿತ್ರದುರ್ಗ ಹಾಲುಒಕ್ಕೂಟ) ವತಿಯಿಂದ ಯೋಗ ದಿನಾಚರಣೆಅಂಗವಾಗಿ ಶುಕ್ರವಾರ ಯೋಗ ಅರಿವುಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.ಶಿಮುಲ್‌ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ,ಚಿತ್ರದುರ್ಗ ಜಿಲ್ಲೆಯ ಎಲ್ಲ ಹಾಲು ಉತ್ಪಾದಕರಸಂಘದ ಕಚೇರಿ, ಶೀಥಲೀಕರಣ ಘಟಕ ಸೇರಿವಿವಿಧ ವಿಭಾಗದ ಅ ಧಿಕಾರಿಗಳು, ಸಿಬ್ಬಂದಿಕಾರ್ಮಿಕರು ಸೇರಿ ಒಟ್ಟೂ 22 ಸಾವಿರಮಂದಿ ವಿವಿಧ ಸ್ಥಳಗಳಲ್ಲಿ ಶುಕ್ರವಾರ ಯೋಗಪ್ರದರ್ಶಿಸಿದರು.

Advertisement

ಶಿಮುಲ್‌ನ ಮುಖ್ಯಕಚೇರಿಯಲ್ಲಿ ಗೌರವ ಡಾಕ್ಟರೇಟ್‌ ಪುರಸ್ಕೃತಬಾ.ಸು. ಅರವಿಂದ ಅವರು ಯೋಗದಅರಿವು ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಡಾ| ರಂಜಿನಿ ಬಿದರಹಳ್ಳಿ ಅವರು ಹಾಲುಮತ್ತು ಹಾಲಿನ ಉತ್ಪನ್ನಗಳ ಸೇವನೆಯಕುರಿತು ಮಾಹಿತಿ ನೀಡಿದರು. ಶಿಮುಲ್‌ನಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ,ಶೀಥಲೀಕರಣ ಕೇಂದ್ರ ಹಾಗೂ ಮುಖ್ಯಡೇರಿ ಘಟಕಗಳಲ್ಲಿ ಒಕ್ಕೂಟದ ಅಧ್ಯಕ್ಷರು,ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು,ವ್ಯವಸ್ಥಾಪಕರು, ಅ ಧಿಕಾರಿಗಳು, ಸಿಬ್ಬಂದಿ,ಸಂಘದ ಸದಸ್ಯರು ಹಾಗೂ ಗುತ್ತಿಗೆ ಕಾರ್ಮಿಕರುಭಾಗವಹಿಸಿದ್ದರು. ಡಾ| ಬಾ.ಸು. ಅರವಿಂದಅವರಿಗೆ ಪ್ರಭಾರ ಅಧ್ಯಕ್ಷ ಎಚ್‌.ಕೆ. ಬಸಪ್ಪ,ನಿರ್ದೇಶಕ ಡಿ.ಆನಂದ್‌, ಎಚ್‌.ಬಿ.ದಿನೇಶ್‌,ಎಂ.ಡಿ ಡಾ| ಕೆ.ಎಸ್‌. ಬಸವರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next