Advertisement

ಕದ್ದ ಜೆಸಿಬಿಯಲ್ಲೇ ಎಟಿಎಂ ಯಂತ್ರ ಕದಿಯಲು ಯತ್ನಿಸಿದ ಖದೀಮ… ಪೊಲೀಸರನ್ನು ಕಂಡು ಪರಾರಿ

09:25 AM Jul 26, 2023 | Team Udayavani |

ಶಿವಮೊಗ್ಗ: ಕದ್ದಿರುವ ಜೆಸಿಬಿ ಬಳಸಿ ಎಟಿಎಂ ಯಂತ್ರ ಕದಿಯಲು ಯತ್ನಿಸಿದ ಕಳ್ಳನೊಬ್ಬ ಪೊಲೀಸರನ್ನು ಕಂಡು ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ವಿನೋಬ ನಗರ ಪೊಲೀಸ್ ಠಾಣಾಯಲ್ಲಿ ಮಂಗಳವಾರ ರಾತ್ರಿ ನಡೆದೆದಿದೆ.

Advertisement

ಇಲ್ಲಿನ ವಿನೋಬನಗರ ಪೊಲೀಸ ಸ್ಟೇಷನ್​ ವ್ಯಾಪ್ತಿಯ ಶಿವಾಲಯ ಬಳಿಯ ಆಕ್ಸಿಸ್​ ಬ್ಯಾಂಕ್ ಎಟಿಎಂವೊಂದರಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಕಳ್ಳತನ ಮಾಡಿದ್ದ ಜೆಸಿಬಿಯನ್ನು ತಂದ ಖದೀಮ ಎಟಿಎಂ ಯಂತ್ರವನ್ನು ಎಗರಿಸಲು ಮುಂದಾಗಿದ್ದಾನೆ ಈ ವೇಳೆ ರಾತ್ರಿ ಬೀಟ್ ನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ ಇದನ್ನು ಕಂಡ ಕಳ್ಳ ಜೆಸಿಬಿ ಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಸಮಯಕ್ಕೆ ಸರಿಯಾಗಿ ಬಂದ ಪೊಲೀಸರಿಂದ ನಡೆಯಬೇಕಿದ್ದ ಕಳ್ಳತನವೊಂದು ತಪ್ಪಿದಂತಾಗಿದೆ.

ದುಷ್ಕರ್ಮಿಯು ಜೆಸಿಬಿ ಬಳಸಿ ಎಟಿಎಂ ಓಪನ್ ಮಾಡುತ್ತಿರುವುದನ್ನ ಗಮನಿಸಿದ ಪೊಲೀಸರು ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಆರೋಪಿ ಎಸ್ಕೇಪ್ ಆಗಿದ್ಧಾನೆ. ಸಮೀಪದಲ್ಲಿಯೇ ಇರುವ ಪೆಟ್ರೋಲ್ ಬಂಕ್​ ಬಳಿಯಲ್ಲಿ ನಿಲ್ಲಿಸಲಾಗಿದ್ದ ಜೆಸಿಬಿಯನ್ನು ಕದ್ದು ಎಟಿಎಂ ಯಂತ್ರ ಕದಿಯಲು ಮುಂದಾಗಿದ್ದಾನೆ ಎನ್ನಲಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.

ಸದ್ಯ ಘಟನೆ ಸಂಬಂಧ ವಿನೋಬನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜೆಸಿಬಿಯನ್ನು ಕೂಡ ತಮ್ಮ ವಶಕ್ಕೆ ಪಡೆದು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: Anju: ಪಾಕ್ ಗೆಳೆಯನೊಂದಿಗೆ ಭಾರತದ ಅಂಜು ಮದುವೆ ಆದದ್ದು ನಿಜವೇ? ಇಲ್ಲಿದೆ ಸತ್ಯಾಸತ್ಯತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next