Advertisement

ಭಂಗಿ ಭೂತಪ್ಪ ದೇವರ ವಾರ್ಷಿಕೋತ್ಸವ

06:29 PM Feb 07, 2021 | Shreeraj Acharya |

ಆನಂದಪುರ: ಸಮೀಪದ ಯಡೇಹಳ್ಳಿ ಗ್ರಾಪಂ ವ್ಯಾಪ್ತಿಯ ಬಸವನ ಹೊಂಡದ ಭಂಗಿ ಭೂತಪ್ಪ ದೇವರ 16 ನೇ ವರ್ಷದ ವಾರ್ಷಿಕೋತ್ಸವ ವೈಭವದಿಂದ ನೆರವೇರಿತು.

Advertisement

ಆಗಮಿಕರಾದ ಶ್ರೀಧರ್‌ ಭಟ್‌ ಅವರ ಆಚಾರ್ಯತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರಿದವು. ನಂತರ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆಯ ನಂತರ ಆಗಮಿಸಿದ ಎಲ್ಲ ಭಕ್ತರಿಗೂ ಸಾಮೂಹಿಕ ಅನ್ನ ಸಂತರ್ಪಣೆ ನೆರವೇರಿತು. ನಂತರ
ಸಮಿತಿಯ ಅಧ್ಯಕ್ಷ ಶೇಖರ್‌ ಶೆಟ್ರಾ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಭೂತಪ್ಪ ಸ್ವಾಮಿಯ ನೂತನ ದೇವಾಲಯ ನಿರ್ಮಾಣವಾಗಲಿದ್ದು
ಈ ದೇವಾಲಯಕ್ಕೆ ಸಾರ್ವಜನಿಕರು ಭಕ್ತಾದಿಗಳು ತನು ಮನ ಧನದೊಂದಿಗೆ ಸಹಕರಿಸುವುದರ ಮೂಲಕ ಶ್ರೀ ಭೂತಪ್ಪಸ್ವಾಮಿ ಕೃಪೆಗೆ ಪಾತ್ರರಾಗಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು. ಸಮಿತಿಯ ಕಾರ್ಯದರ್ಶಿ ಮಂಜಪ್ಪ, ಖಜಾಂಚಿ ಹಾಲಪ್ಪ, ಮಾಜಿ ಅಧ್ಯಕ್ಷ ಹುಚ್ಚಪ್ಪ, ವೀರೇಶ್‌ ಮತ್ತಿತರರು ಇದ್ದರು.

ಓದಿ : ರೈತರ ಹಿತ ಕಾಪಾಡುವಲ್ಲಿ ಶಾಸಕರು ವಿಫಲ: ಶ್ರೀನಿವಾಸ್‌

 

Advertisement

Udayavani is now on Telegram. Click here to join our channel and stay updated with the latest news.

Next