Advertisement

156 ಮಂದಿ ರೌಡಿಶೀಟರ್‌ಗಳ ಪರೇಡ್‌

06:34 PM Feb 05, 2021 | Shreeraj Acharya |

ಶಿವಮೊಗ್ಗ: ನಗರದ ಡಿ.ಎ.ಆರ್‌. ಪೊಲೀಸ್‌ ಮೈದಾನದಲ್ಲಿ ಗುರುವಾರ ರೌಡಿಗಳ ಪರೇಡ್‌ ನಡೆಸಲಾಯಿತು. ದೊಡ್ಡಪೇಟೆ, ಗ್ರಾಮಾಂತರ,
ತುಂಗಾ ನಗರ, ಕೋಟೆ ಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯ 156 ರೌಡಿ ಶೀಟರ್‌ಗಳಿಗೆ ಜಿಲ್ಲಾ ಪೊಲೀಸ್‌ ಅ ಧೀಕ್ಷಕ ಕೆ.ಎಂ. ಶಾಂತರಾಜು
ಎಚ್ಚರಿಕೆ ನೀಡಿದ್ದಾರೆ.

Advertisement

ನಗರದಲ್ಲಿ ಇತ್ತೀಚೆಗೆ ಕೊಲೆ, ಸರಗಳವು, ಸೇರಿದಂತೆ ಅಪರಾಧ ಕೃತ್ಯಗಳು ಹೆಚ್ಚಾದ ಹಿನ್ನೆಲೆ ಮತ್ತು ಬಾರ್‌ಗಳ ಬಳಿ ಗಲಾಟೆ, ವಾಹನಗಳಲ್ಲಿ ಮಾರಕಾಸ್ತ್ರ ಹಿಡಿದು ಓಡಾಡುವುದು ಮೊದಲಾದ ಕೃತ್ಯಗಳು ಕಂಡುಬಂದಿದ್ದರಿಂದ ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ.
ಪೊಲೀಸ್‌ ಮೈದಾನದಲ್ಲಿ ಮಾತನಾಡಿದ ಕಾನೂನು ಸುವ್ಯವಸ್ಥೆಗೆ ಭಂಗ ತಂದಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ. ಒಂದು ಸಣ್ಣ ಬ್ಲೇಡ್‌ ಸಿಕ್ಕರೂ ಕೂಡ ಕ್ರಮಕೈಗೊಳ್ಳಲಾಗುವುದು. ಆಯುಧಗಳು ಕಂಡು ಬಂದಲ್ಲಿ ಜಾಮೀನು ರದ್ದು ಮಾಡಲಾಗುವುದು ಎಂದು
ಎಸ್‌.ಪಿ. ಎಚ್ಚರಿಕೆ ನೀಡಿದರಲ್ಲದೆ ಅನಾವಶ್ಯಕವಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ ಪಾರ್ಕಿಂಗ್‌ ಜಾಗದಲ್ಲಿ ಕಾಲ ಕಳೆಯುವಂತಿಲ್ಲ.
ರಸ್ತೆ ಬದಿಗಳಲ್ಲಿ ನಿಂತು ಗಲಾಟೆ ಮಾಡುವಂತಿಲ್ಲ, ಜಗಳವಾಡುವಂತಿಲ್ಲ ಎಂದು ತಾಕೀತು ಮಾಡಿದ ಅವರು ಸನ್ನಡತೆ ಬೆಳೆಸಿಕೊಳ್ಳಿ ಎಂದು ಬುದ್ಧಿವಾದ ಹೇಳಿದರು.

ಓದಿ : “ಕ್ರಿಕೆಟ್‌ ವಿಲನ್‌’ ಹೆರಾಲ್ಡ್‌ ಲಾರ್‌ವುಡ್‌: ನಾಯಕನ ಮಾತು ಕೇಳಿ ವಿಲನ್ ಆದ ಹೆರಾಲ್ಡ್!

Advertisement

Udayavani is now on Telegram. Click here to join our channel and stay updated with the latest news.

Next