Advertisement

ಬಿಜೆಪಿಯಿಂದ ದೇಶ ಮತ್ತೆ ಗುಲಾಮಗಿರಿಯತ್ತ: ಸುಂದರೇಶ್‌

06:12 PM Jan 31, 2021 | Shreeraj Acharya |

ಶಿವಮೊಗ್ಗ: ಇಲ್ಲಿನ ಕಾಂಗ್ರೆಸ್‌ ಜಿಲ್ಲಾ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ 73ನೇ ಪುಣ್ಯಸ್ಮರಣೆಯನ್ನು ಗಾಂ ಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವ ಮೂಲಕ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಮಾತನಾಡಿ, ಮಹಾತ್ಮ ಗಾಂಧಿಜಿ ಬ್ರಿಟೀಷರ ವಿರುದ್ಧ ಅಹಿಂಸೆಯಿಂದಲೇ ಹೋರಾಡಿದವರು. ಅಂದು ಬ್ರಿಟೀಷರ ಏಜೆಂಟರಂತೆ ಕೆಲಸಮಾಡುತ್ತಿದ್ದ ವರ್ಗವೇ ಇಂದು ದೇಶವನ್ನು ಆಳುತ್ತಿದೆ. ಮತ್ತೆ ನಾವು ಸ್ವಾತಂತ್ರ ಪೂರ್ವಕ್ಕೆ ಹೋಗುತ್ತಿದ್ದೇವೆ. ಬಿಜೆಪಿ ಈ ದೇಶವನ್ನು ಮತ್ತೆ ಗುಲಾಮಗಿರಿಗೆ ತಳ್ಳುತ್ತಿದೆ
ಎಂದರು.

Advertisement

ಬಿಜೆಪಿ ಆಡಳಿತದಲ್ಲಿ ಗಾಂಧಿಧೀಜಿಯವರ ಆದರ್ಶಗಳೇ ಮಾಯವಾಗುತ್ತಿವೆ. ಅರಾಜಕತೆ ತಾಂಡವವಾಡುತ್ತಿದೆ. ಯುವ ಸಮೂಹ ದಾರಿ ತಪ್ಪುತ್ತಿದೆ. ಕಾರ್ಪೊರೇಟ್‌ ಕಂಪನಿಗಳು ವಿಜೃಂಭಿಸುತ್ತಿವೆ. ಈ ದೇಶಕ್ಕೆ ಸ್ವಾತಂತ್ರದ ಕೊಡುಗೆ ನೀಡಿದ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳನ್ನು ನಮ್ಮ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.
ಕಾಂಗ್ರೆಸ್‌ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಎಚ್‌. ನಾಗರಾಜ್‌ ಮಾತನಾಡಿ ಗಾಂಧಿಜಿಯವರು ಕೇವಲ ವ್ಯಕ್ತಿಯಾಗಿರಲಿಲ್ಲ ಅವರೊಂದು ಶಕ್ತಿಯಾಗಿದ್ದರು. ಗಾಂಧೀಜಿಯವರ ನಡೆ-ನುಡಿ ಆದರ್ಶ ಇವೆಲ್ಲವನ್ನು ಎಲ್ಲರೂ ಪಾಲಿಸಬೇಕಾಗಿದೆ. ಕೋಮು ಸೌಹಾರ್ದತೆಗಾಗಿ ತಮ್ಮ ಜೀವವನ್ನೇ ಬಲಿ ಕೊಟ್ಟವರು ಅವರು. ಆದರೆ ಇಂದು ಆ ಸೌಹಾರ್ದತೆಯೇ ಇಲ್ಲವಾಗಿದೆ ಎಂದರು.
ಮಾಜಿ ಶಾಸಕ ಎಚ್‌.ಎಂ. ಚಂದ್ರಶೇಖರಪ್ಪ, ಕಾಂಗ್ರೆಸ್‌ ವಕ್ತಾರೆ ಪಲ್ಲವಿ, ಹಿರಿಯ ಮುಖಂಡ ರಾಮೇಗೌಡ, ಮಹಾನಗರ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಭೂಪಾಲ್‌, ಮಹಾಬಲೇಶ್ವರ ಇದ್ದರು.

ಓದಿ : ಸಿಲಿಂಡರ್‌ ಪೈಪ್‌ಗೆ ಬೆಂಕಿ: ತಪಿದ ಅನಾಹುತ

 

Advertisement
Advertisement

Udayavani is now on Telegram. Click here to join our channel and stay updated with the latest news.

Next