Advertisement

ಮುಂದುವರಿದ ‘ಶಿವಾಜಿ ಸುರತ್ಕಲ್‌-2’ ಸಿನಿಮಾದ ಓಟ

05:42 PM May 10, 2023 | Team Udayavani |

ನಟ ರಮೇಶ್‌ ಅರವಿಂದ್‌ ಅಭಿನಯದ “ಶಿವಾಜಿ ಸುರತ್ಕಲ್‌-2′ ಸಿನಿಮಾದ ಓಟ ಮುಂದುವರೆದಿದ್ದು, ಸಿನಿಮಾ ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾಗಿ ಮೊದಲ ವಾರ ಕಳೆದ ನಂತರ ಸಿನಿಮಾ ಬಿಡುಗಡೆಯಾಗಿರುವ ಥಿಯೇಟರ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ “ಶಿವಾಜಿ ಸುರತ್ಕಲ್‌-2′ ಸಿನಿಮಾ ಮಾತ್ರ ಇದಕ್ಕೆ ಅಪವಾದ. ಸಿನಿಮಾ ಬಿಡುಗಡೆಯಾದ ನಂತರ ವಾರದಿಂದ ವಾರಕ್ಕೆ ಸಿನಿಮಾಕ್ಕೆ ಸಿಗುತ್ತಿರುವ ಥಿಯೇಟರ್‌ ಗಳ ಸಂಖ್ಯೆ ಏರಿಕೆಯಾಗುತ್ತಿದೆ.

Advertisement

ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳೇ “ಶಿವಾಜಿ ಸುರತ್ಕಲ್‌-2′ ಸಿನಿಮಾಕ್ಕೆ ಹೆಚ್ಚು ಥಿಯೇಟರ್‌ ಗಳು ಮತ್ತು ಶೋಗಳನ್ನು ಸಿಗುವಂತೆ ಮಾಡಿದೆ ಎಂಬುದು ಚಿತ್ರತಂಡದ ಮಾತು.

ಇನ್ನು “ಶಿವಾಜಿ ಸುರತ್ಕಲ್‌-2′ ಸಿನಿಮಾದ ಯಶಸ್ವಿ ಪ್ರದರ್ಶನದ ನಡುವೆಯೇ ಸಿನಿಮಾದ ನಿರ್ದೇಶಕ ಆಕಾಶ್‌ ಶ್ರೀವತ್ಸ ಹಾಗೂ ನಿರ್ಮಾಪಕ ಅನೂಪ್‌ ಗೌಡ ಮೈಸೂರಿನ ಮಹಾರಾಜರಾದ ಶ್ರೀಯದುವೀರ ಒಡೆಯರ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮಹಾರಾಜ ಶ್ರೀ ಯದುವೀರ ಒಡೆಯರ್‌ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಇನ್ನಷ್ಟು ಯಶಸ್ಸು ಸಿಗಲಿ ಎಂದು ಚಿತ್ರತಂಡಕ್ಕೆ ಹಾರೈಸಿದ್ದರೆ. ಜೊತೆಗೆ ಸಿನಿಮಾದ ನಾಯಕ ನಟ ರಮೇಶ್‌ ಅರವಿಂದ್‌ ಅವರಿಗೆ ವಿಶೇಷ ಅಭಿನಂದನೆಗಳನ್ನು ಕೂಡ ಸಲ್ಲಿಸಿದ್ದಾರೆ.

ಸದ್ಯ ಚುನಾವಣೆಯ ಹಾಗೂ ಐಪಿಎಲ್‌ ಅಬ್ಬರದ ನಡುವೆಯೂ ನಮ್ಮ ಸಿನಿಮಾಕ್ಕೆ ಈ ಮಟ್ಟದ ಯಶಸ್ಸು ಸಿಕ್ಕಿರುವುದು ನಮಗೆ ಮತ್ತಷ್ಟು ಉತ್ಸಾಹ ತಂದಿದೆ. ಅನೇಕ ಗಣ್ಯರು ಸಿನಿಮಾದ ಬಗ್ಗೆ ಮೆಚ್ಚುಗೆಯ ಮತ್ತು ಪ್ರಶಂಸನೆಯ ಮಾತುಗಳನ್ನಾಡುತ್ತಿದ್ದು, ಜೊತೆಗೆ ಥಿಯೇಟರ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಇಡೀ ಚಿತ್ರತಂಡಕ್ಕೆ ಖುಷಿ ತಂದಿದೆ ಎನ್ನುವುದು ಚಿತ್ರತಂಡದ ಮಾತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next