Advertisement

Shiva Rajkumar: ಅಪ್ಪುವಿನ ಸಮಾಧಿ ಕಡೆ ಹೋಗುವುದಿಲ್ಲ.. ಪುನೀತ್ ನೆನೆದು ಶಿವಣ್ಣನ ಮಾತು

04:03 PM Oct 19, 2023 | Team Udayavani |

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರ ʼಘೋಸ್ಟ್‌ʼ ಸಿನಿಮಾ ರಿಲೀಸ್‌ ಆಗಿದೆ. ಅಭಿಮಾನಿಗಳು ಮುಂಜಾನೆಯೇ ಥಿಯೇಟರ್‌ ಮುಂದೆ ಸಾಲಾಗಿ ನಿಂತು ʼಒರಿಜಿನಲ್‌ ಗ್ಯಾಂಗ್‌ ಸ್ಟರ್‌ʼ ಗೆ ಜೈಕಾರ ಹಾಕಿದ್ದಾರೆ.

Advertisement

ʼಜೈಲರ್‌ʼ ಬಳಿಕ ಶಿವರಾಜ್‌ ಕುಮಾರ್‌ ಅವರಿಗೆ ಬೇಡಿಕೆ ಹೆಚ್ಚಾಗಿದೆ. ʼನರಸಿಂಹʼನ ಪಾತ್ರದ ಬಳಿಕ ಅದೇ ರೀತಿಯ ಪಾತ್ರಕ್ಕಾಗಿ ಶಿವಣ್ಣನಿಗೆ ಈಗಾಗಲೇ ಆಫರ್‌ ಗಳು ಬಂದಿದೆ. ಸದ್ಯ ಶಿವರಾಜ್‌ ಸಿನಿಮಾದ ಪ್ರಚಾರದ ಅಂಗವಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ʼಪಿಂಕ್‌ ವಿಲ್ಲಾʼ ನಡೆಸಿದ ಸಂದರ್ಶನದಲ್ಲಿ ನಟ ಶಿವರಾಜ್‌ ಕುಮಾರ್‌ ಪವರ್‌ ಸ್ಟಾರ್‌ ಅಪ್ಪು ಅವರ ಬಗ್ಗೆ ಮಾತನಾಡಿದ್ದಾರೆ. ಪುನೀತ್‌ ಕಳೆದುಕೊಂಡದ್ದರ ಬಗ್ಗೆ ಶಿವರಾಜ್‌ ಕುಮಾರ್‌ ಮಾತನಾಡಿದ್ದಾರೆ.

“ನನಗೆ ಅಪ್ಪು ನಮ್ಮಿಂದ ದೂರವಾಗಿದ್ದಾರೆ ಎಂದು ಅನ್ನಿಸುತ್ತಿಲ್ಲ. ಅಪ್ಪು ಯಾವಾಗಲೂ ನನ್ನೊಂದಿಗೆ ಇದ್ದಾನೆ” ಎಂದು ಶಿವಣ್ಣ ಹೇಳಿದ್ದಾರೆ.

“ನಾನು ಅಪ್ಪುವಿನ ಸಮಾಧಿ ಕಡೆ ಹೋಗುವುದಿಲ್ಲ. ಆ ಕಲ್ಪನೆಯ ಬಗ್ಗೆ ನನಗೆ ನಂಬಿಕೆ ಇಲ್ಲ.ನನ್ನ ಅಪ್ಪ – ಅಮ್ಮನ ವಿಚಾರದಲ್ಲೂ ಹೀಗೆಯೇ” ಎಂದು ನಟ ಹೇಳಿದ್ದಾರೆ.

Advertisement

“ಅಪ್ಪುವಿನ ಸಮಾಧಿವಿರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಶೂಟಿಂಗ್‌ ವಿದ್ದರೆ ಮಾತ್ರ ನಾನು ಅಲ್ಲಿಗೆ ಅಪರೂಪಕ್ಕೆ ಹೋಗುತ್ತೇನೆ. ಇಲ್ಲದಿದ್ದರೆ ಹೋಗುವುದಿಲ್ಲ. ನನಗೆ ಅಪ್ಪು ನನ್ನೊಂದಿಗೆ ಇಲ್ಲ ಎನ್ನುವ ಅನುಭವವಾಗಿಲ್ಲ. ಸಮಾಧಿವಿರುವ ಜಾಗಕ್ಕೆ ಹೋಗಿ ಪೂಜೆ ಎಲ್ಲ ಮಾಡಿದರೆ ನಾವು ಅವರನ್ನು ಕಳುಹಿಸಿದ್ದೇನೆ ಎನ್ನುವ ಭಾವನೆ ಬರುತ್ತದೆ. ಈ ಕಾರಣಕ್ಕಾಗಿ ನಾನು ಹಾಗೆ ಮಾಡಲು ಬಯಸುವುದಿಲ್ಲ” ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರನ್ನು ಪ್ರೀತಿಸುವ ಪ್ರತಿಯೊಬ್ಬರ ಹೃದಯದಲ್ಲಿ ಯಾವಾಗಲೂ ಅವರು ಇರುತ್ತಾರೆ. ಅವರನ್ನು ಸದಾ ನಮ್ಮೊಂದಿಗೆ ಬದುಕುವಂತೆ ಮಾಡಬೇಕೆಂಬುದು ನನ್ನ ಆಸೆ’ ಎಂದು ಶಿವಣ್ಣ ಹೇಳಿದ್ದಾರೆ.

ಶಿವರಾಜ್‌ ಕುಮಾರ್‌ ಧನುಷ್‌ ಅವರ ʼಕ್ಯಾಪ್ಟನ್‌ ಮಿಲ್ಲರ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್‌ ಲಾಲ್‌ – ಪೃಥ್ವಿರಾಜ್‌ ಅವರ ʼ ಲೂಸಿಫರ್-2ʼ(ಎಂಪುರಾನ್) ಸಿನಿಮಾದಲ್ಲಿ ಶಿವರಾಜ್‌ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಆದರೆ ಇದು ಇನ್ನಷ್ಟೇ ಅಧಿಕೃತವಾಗಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next