Advertisement

Shiv Sena: ಉದ್ದವ್‌ ಶಿವಸೇನೆ ಅಭ್ಯರ್ಥಿಗಳ ಪಟ್ಟಿ ರಿಲೀಸ್‌: ಸ್ಥಳೀಯ ಕೈ ನಾಯಕತ್ವ ಗರಂ

09:54 PM Mar 27, 2024 | Team Udayavani |

ಮುಂಬೈ: ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟ ಮಧ್ಯೆ ಸೀಟು ಹಂಚಿಕೆ ಸಂಬಂಧ ಬಿರುಕು ಮೂಡಿದೆ. ಉದ್ಧವ್‌ ಠಾಕ್ರೆ ಶಿವಸೇನೆಯು 17 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕರೊಬ್ಬರು ತಿರುಗಿ ಬಿದ್ದಿದ್ದಾರೆ. ಶಿವಸೇನೆ ಮುಂಬೈನಲ್ಲಿ ಕಾಂಗ್ರೆಸ್‌ ಮುಗಿಸುವ ಹುನ್ನಾರ ಮಾಡಿದ್ದು, ಮೈತ್ರಿಯಿಂದ ಹೊರ ಬರುಂತೆ ಕಾಂಗ್ರೆಸ್‌ನ ಉನ್ನತ ನಾಯಕತ್ವಕ್ಕೆ ಆಗ್ರಹಿಸಿದ್ದಾರೆ. ಒಟ್ಟು 22 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಶಿವಸೇನೆ ಉದ್ಧವ್‌ ಬಣ ಹೇಳಿದೆ. ಮೊದಲ ಪಟ್ಟಿಯಲ್ಲಿ ಮಾಜಿ ಸಚಿವರಾಗಿರುವ ಸಚಿವ ಅನಂತ್‌ ಗೀತೆ, ಅರವಿಂದ್‌ ಸಾವಂತ್‌ ಸೇರಿ ಪ್ರಮುಖರಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

ನಿರುಪಂ ಆಕ್ರೋಶ:
ರಾಜ್ಯಸಭೆಯ ಮಾಜಿ ಸಂಸದ ಸಂಜಯ್‌ ನಿರುಪಮ್‌, ಉದ್ಧವ್‌ ಬಣವು ಮುಂಬೈನ ಐದೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹೆಸರಿಸಿದೆ. ಈ ಮೂಲಕ ಮುಂಬೈನಲ್ಲಿ ಕಾಂಗ್ರೆಸ್‌ ಅನ್ನು ಮುಗಿಸುವ ಯೋಜನೆ ಇರುವಂತಿದೆ. ಕೂಡಲೇ ಕಾಂಗ್ರೆಸ್‌ ವರಿಷ್ಠರು ಮಧ್ಯ ಪ್ರವೇಶಿಸಿ ಮೈತ್ರಿ ಮರಿದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮುಂಬೈ ವಾಯವ್ಯ ಕ್ಷೇತ್ರದ ಅಭ್ಯರ್ಥಿಯನ್ನು ನಿಂದಿಸಿದ್ದೂ ವಿವಾದಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಬಳಿಕ ಅತಿ ಹೆಚ್ಚು 48 ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಶಿವಸೇನೆ(ಉದ್ಧವ್‌ ಬಣ) ಎನ್‌ಸಿಪಿ(ಶರದ್‌ ಬಣ) ಮತ್ತು ಕಾಂಗ್ರೆಸ್‌ ಮಧ್ಯೆ ಸೀಟು ಹಂಚಿಕೆ ಅಂತಿಮವಾಗಿಲ್ಲ. ಹಾಗಾಗಿ ಗೊಂದಲ ಮುಂದುವರಿದಿದೆ.

“ಮಹಾ ಮೈತ್ರಿ’ಯಿಂದ ಹೊರಬಂದ ಅಂಬೇಡ್ಕರ್‌ ಮೊಮ್ಮಗ
ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರ ವಂಚಿತ್‌ ಬಹುಜನ್‌ ಆಘಾಡಿ(ವಿಬಿಎ) ಹೊರ ಬಂದಿದೆ. ಚುನಾವಣೆಯಲ್ಲಿ ವಿಬಿಎ ಏಕಾಂಗಿಯಾಗಿ ಸ್ಪರ್ಧಿಸಲಿದೆ. 8 ಕ್ಷೇತ್ರಗಳಿಗಾಗಿ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ ಎಂದು ಅವರು ಪ್ರಕಾಶ್‌ ಅಂಬೇಡ್ಕರ್‌ ಹೇಳಿದ್ದಾರೆ. ವಂಶಾಡಳಿತಕ್ಕಾಗಿ ವಂಚಿತ್‌ ಬಹುಜನ್‌ ಅಘಾಡಿಯನ್ನು ಗುರಾಣಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: BJD: ಪಟ್ಟಿ ಬಿಡುಗಡೆ ಮಾಡಿದ ಬಿಜೆಡಿ… ಹಾಕಿ ತಾರೆ ದಿಲೀಪ್‌ ಟಿರ್ಕಿ ಲೋಕಸಭೆ ಅಭ್ಯರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next